Saturday, April 27, 2024
Homeಕರಾವಳಿಬಾಕ್ಸೈಟ್‌ ಮಣ್ಣು ಲಾಬಿಗೆ ಮಣಿಯಿತೇ ಸರ್ಕಾರ ? ಮಂಗಳೂರು ಎಸಿ ಮದನ್ ಮೋಹನ್ ವರ್ಗಾವಣೆ

ಬಾಕ್ಸೈಟ್‌ ಮಣ್ಣು ಲಾಬಿಗೆ ಮಣಿಯಿತೇ ಸರ್ಕಾರ ? ಮಂಗಳೂರು ಎಸಿ ಮದನ್ ಮೋಹನ್ ವರ್ಗಾವಣೆ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಉಪವಿಭಾಗ ಉಪವಿಭಾಗಾಧಿಕಾರಿ (ಎಸಿ) ಮದನ್‌ ಮೋಹನ್‌ ಸಿ. ಅವರನ್ನು‌ ವರ್ಗಾವಣೆ ಮಾಡಿ, ಅವರ ಸ್ಥಾನಕ್ಕೆ ಮಂಗಳೂರು ಸ್ಮಾರ್ಟ್‌ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ ರವಿಚಂದ್ರ ನಾಯಕ್‌ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.

ಬಾಕ್ಸೈಟ್‌ ದಂಧೆಗೆ ಮಣಿಯಿತೇ ಸರ್ಕಾರ ?
ಮಂಗಳೂರಿನ ಹೊರವಲಯದ ಮುಡಿಪು ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿದ್ದ ಕೆಂಪು ಬಾಕ್ಸೈಟ್‌ ದಂಧೆಯ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್‌ ಸಿ. ನೇತೃತ್ವದ ತಂಡ ಇತ್ತೀಚೆಗೆ ದಾಳಿ ನಡೆಸಿ 30 ಲಾರಿ, ಹಿಟಾಚಿ, ಜೆಸಿಬಿಗಳನ್ನು ವಶಪಡಿಸಿಕೊಂಡಿತ್ತು. ಬಾಕ್ಸೈಟ್‌ ದಂಧೆಯಲ್ಲಿ ಕೆಲವು ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದು, ಈ ದಾಳಿ ಪ್ರಭಾವಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ರಾಜ್ಯ ಸರಕಾರ ಮಂಗಳೂರು ಉಪವಿಭಾಗ ಉಪವಿಭಾಗಾಧಿಕಾರಿಯವರನ್ನು ವರ್ಗಾವಣೆ ಮಾಡುವ ಮೂಲಕ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಬಾಕ್ಸೈಟ್‌ ದಂಧೆಗೆ ಮಣಿಯಿತೇ ಎಂಬ ಅಪಸ್ವರಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

- Advertisement -
spot_img

Latest News

error: Content is protected !!