- Advertisement -
- Advertisement -
ಮಂಗಳೂರು: ಶಾರದೋತ್ಸವಕ್ಕೆ ಅಳವಡಿಸಿದ್ದ ಬ್ಯಾನರ್ ಹರಿದು ಹಾಕಿರುವ ಘಟನೆ ವಾಮಂಜೂರು ಬಳಿ ನಡೆದಿದೆ.ವಾಮಂಜೂರು ಫ್ರೆಂಡ್ಸ್ ಟೀಂ ಅಳವಡಿಸಿದ್ದ ಐದಾರು ಬ್ಯಾನರ್ ಗಳನ್ನು ಕಿಡಿಗೇಡಿಗಳು ಯತ್ನಿಸಿದ್ದಾರೆ.
ಬ್ಯಾನರ್ ಹರಿದು ಹಾಕುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸ್ಥಳೀಯ ಗಾಂಜಾ ವ್ಯಸನಿಗಳಿಂದ ಕೃತ್ಯ ನಡೆದಿರುವ ಆರೋಪ ವ್ಯಕ್ತವಾಗಿದೆ.
ಕೃತ್ಯದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದ್ದು, ಸಿಸಿಟಿವಿ ದೃಶ್ಯ ಇದ್ದರೂ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಹೇಳಲಾಗಿದೆ. ಕಿಡಿಗೇಡಿಗಳ ಕೃತ್ಯದ ವಿರುದ್ದ ವಾಮಂಜೂರು ಫ್ರೆಂಡ್ಸ್ ಟೀಮ್ ಸದಸ್ಯರು ಗುಳಿಗ ದೈವದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
- Advertisement -