- Advertisement -
- Advertisement -
ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಕರ್ನಾಟಕ ಸರ್ಕಾರದ ಅಧೀನದ ಮೌಲಾನ ಅಝಾದ್ ಅಲ್ಪಸಂಖ್ಯಾತರ ಭವನದ ಮೇಲೆ ಆ.13 ರ ಗುರುವಾರ ತಡರಾತ್ರಿ ಕಲ್ಲು ತೂರಾಟ ನಡೆಸಿರುವ ಪ್ರಕರಣವನ್ನು ಪಾಂಡೇಶ್ವರ ಪೊಲೀಸರು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಧನ್ರಾಜ್, ಸುಶಾಂತ್, ಸಾಗರ್, ಕಾರ್ತಿಕ್, ಮನಿಷ್ ಹಾಗೂ ಇನ್ನೋರ್ವ ಬಾಲಕನಾಗಿದ್ದಾನೆ.
ಬಾಲಕನಿಗೆ ನ್ಯಾಯಾಲಯ ಜಾಮೀನು ನೀಡಿದ್ದು ಉಳಿದ ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
- Advertisement -