Thursday, May 2, 2024
Homeಕರಾವಳಿಮಂಗಳೂರಿನ ಯುವತಿಯೊಂದಿಗೆ ಲವ್, ಸೆಕ್ಸ್ ಎಂಗೇಜ್ಮೆಂಟ್.. ಬೆಳ್ತಂಗಡಿಯ ಯುವತಿಯೊಂದಿಗೆ ಮದುವೆ !

ಮಂಗಳೂರಿನ ಯುವತಿಯೊಂದಿಗೆ ಲವ್, ಸೆಕ್ಸ್ ಎಂಗೇಜ್ಮೆಂಟ್.. ಬೆಳ್ತಂಗಡಿಯ ಯುವತಿಯೊಂದಿಗೆ ಮದುವೆ !

spot_img
- Advertisement -
- Advertisement -

ಮಂಗಳೂರು: ಅವನೊಬ್ಬ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಒಂದು ಸುಂದರಿಯ ಹಿಂದೆ ಬಿದ್ದು ಕಾಡಿ ಬೇಡಿ ಪ್ರೀತಿ ಪ್ರೇಮ ಅಂತಾ ತಲೆ ತಿಂದಿದ್ದ. ಆ ಚೆಲುವೆ ಆತನ ಪ್ರೀತಿಯ ಪಾಶಕ್ಕೆ ಬಿದ್ದು ಪ್ರೀತಿ, ಪ್ರೇಮ ಕೊಡುವುದರ ಜೊತೆಗೆ ಅದನ್ನು ಕೊಟ್ಟಿದ್ದಳು. ಆಕೆಯ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಆತ ಈಗ ದೋಖಾ ಮಾಡಿದ್ದಾನೆ.

ನವಾಜ್ ನಿಂದ ಮೋಸಗೊಳಗಾದ ಮಂಗಳೂರಿನ ಯುವತಿ

ಮೋಸ ಮಾಡಿರುವವನ ಹೆಸರು ನವಾಜ್. ಮಂಗಳೂರು ನಿವಾಸಿ. ಇದೇ ತಿಂಗಳು 24 ಕ್ಕೆ ಈತನೊಂದಿಗೆ ಈ ಯುವತಿಯ ವಿವಾಹ ಫಿಕ್ಸ್ ಆಗಿತ್ತು. ಕಳೆದ ತಿಂಗಳು ಇಬ್ಬರಿಗೆ ಎಂಗೇಜ್ಮೆಂಟ್ ಕೂಡ ಮಾಡಿ ಬಿಟ್ಟಿದ್ದರು. ಆದ್ರೆ ಈತನ ವಿರುದ್ಧ ಈಗ ಈ ಯುವತಿ ಲವ್, ಸೆಕ್ಸ್, ಮನಿ ಅಂಡ್ ದೋಖಾ ಆರೋಪವನ್ನು ಮಾಡಿದ್ದಾಳೆ.

ಹೌದು ಇಬ್ಬರು ಮಂಗಳೂರು ನಿವಾಸಿಗಳಾಗಿದ್ದು ಈ 20 ವರ್ಷದ ಯುವತಿ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೇ ಕಂಪೆನಿಯಲ್ಲಿ ನವಾಜ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಸುಂದರವಾಗಿದ್ದ ಈಕೆಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ. ಇನ್ನು ಕಳೆದ 4 ತಿಂಗಳಿಂದ ಶುರುವಾದ ಪ್ರೀತಿಯಲ್ಲಿ ಇಬ್ಬರ ದೈಹಿಕ ಸಂಪರ್ಕ ಕೂಡ ಆಗಿತ್ತು. ಇನ್ನು ಈ ವಿಷಯ ಮನೆಯವರಿಗೆ ಗೊತ್ತಾಗಿತ್ತು. ಆದ್ರಿಂದ ಇದೇ ತಿಂಗಳ 24 ರಿಂದ ಮದುವೆ ಫಿಕ್ಸ್ ಮಾಡಿ ಇದಕ್ಕೂ ಮೊದಲೇ ಎಂಗೇಜ್ಮೆಂಟ್ ಮಾಡಿ ಬಿಟ್ಟಿದ್ದರು.

ನವಾಜ್ ಮತ್ತು ವಂಚನೆಗೊಳಗಾದ ಯುವತಿಯೊಡನೆ ನಡೆದ ಎಂಗೇಜ್ಮೆಂಟ್ ನ ಫೋಟೋ

ಆದ್ರೆ ಇದ್ದಕ್ಕಿದ್ದ ಹಾಗೆ ಇಂದು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ನವಾಜ್ ಗೆ ಮದುವೆಯನ್ನು ಮಾಡಲಾಗಿದೆ. ಇಂದು ನವಾಜ್ ಬೇರೊಬ್ಬಳ ಜೊತೆ ಮದುವೆಯಾಗುತ್ತಿದ್ದಾನೆ ಎಂದು ತಿಳಿದ ತಕ್ಷಣ ಈ ಯುವತಿ ತನ್ನವರನ್ನು ಕರೆದುಕೊಂಡು ಹೋಗಿ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ನಿನ್ನ ರಾತ್ರಿಯೇ ಧರ್ಮಸ್ಥಳ ಪೊಲೀಸ್ ಠಾಣೆಗೆ ಹೋಗಿ ಮದುವೆ ನಿಲ್ಲಿಸುವಂತೆ ದೂರು ನೀಡಿದ್ದಾಳೆ. ಈ ಮದ್ಯೆ ಆತ ಬಂಟ್ವಾಳದ ವಗ್ಗ ನಿವಾಸಿಯಾಗಿರುವುದರಿಂದ ಬಂಟ್ವಾಳ ಪೊಲೀಸ್ ಠಾಣೆಗೂ ದೂರು ನೀಡಿದ್ದಾಳೆ.

ಇನ್ನು ಮದುವೆಯನ್ನು ಅರ್ಹಗೊಳಿಸದಂತೆ ಜಮಾಹತ್ ಗೂ ಕರೆ ಮಾಡಿ ದೂರು ನೀಡಿದ್ದಾಳೆ. ಆದ್ರೆ ಇಂದು ಎಷ್ಟೇ ಪ್ರಯತ್ನ ಪಟ್ಟರು ಕೂಡ ನವಾಜ್ ಬೇರೊಬ್ಬ ಯುವತಿಯೊಂದಿಗೆ ಮನೆಯಲ್ಲೆ ಮದುವೆಯಾಗಿದ್ದಾನೆ.

ಇನ್ನು ನವಾಜ್ ಇದ್ದಕ್ಕಿದ್ದ ಹಾಗೆ ಬೇರೆ ಮದುವೆಯಾಗಲು ಹಲವಾರು ಕಾರಣಗಳಿವೆ. ನವಾಜ್ ಸ್ನೇಹಿತ ಹಕೀಂ ಕುರ್ಲಾಡ್ಕ ಎಂಬಾತ ಈ ಯುವತಿಯ ಶೀಲದ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ನವಾಜ್ ಗೆ ಹೇಳಿದ್ದಾನೆ. ಇನ್ನು ನವಾಜ್ ಕೂಡ ಇವಳೊಂದಿಗೆ ಅನುಭಿವಿಸಬೇಕಾದ ಸುಖವನ್ನು ಅನುಭಿವಿಸಿಯಾಗಿತ್ತು. ಅಲ್ಲದೇ ಯುವತಿಯ ಮನೆಯಲ್ಲಿ ತೀರಾ ಬಡವರು. ಆದ್ರಿಂದ ಈತನಿಗೆ ವರದಕ್ಷಿಣೆ ಅಂತಾ ಕೊಡುವ ಲಕ್ಷಣ ಇರಲಿಲ್ಲ. ಆದ್ರಿಂದ ಈತ ಇದನ್ನೆ ನೆಪವಾಗಿಟ್ಟುಕೊಂಡು ಎಸ್ಕೇಪ್ ಆಗಲು ಮುಂದಾಗಿದ್ದಾನೆ.

ಆಗ ಮನೆಯವರಿಗೆ ವಿಚಾರ ಗೊತ್ತಾಗಿ ಆತನ ಕೈಕಾಲು ಹಿಡಿದು ಒಂದೂವರೆ ಲಕ್ಷ ಹಣ ಕೊಡುವುದಾಗಿ ಹೇಳಿ 60 ಸಾವಿರ ಹಣವನ್ನು ಮೊದಲು ಕೊಟ್ಟಿದ್ದಾರೆ. ಇನ್ನು ಹಣ ಪಡೆದು ಕೂಡ ನವಾಜ್ ಧೋಖಾ ಮಾಡಿದ್ದಾನೆ ಅಂತಾ ಯುವತಿ ಆರೋಪಿಸಿದ್ದಾಳೆ.

ಸದ್ಯ ಈ ಮದುವೆಯನ್ನು ಪರಿಗಣಿಸದಂತೆ ಈ ಯುವತಿ ಮತ್ತು ಸಂಬಂಧಿಕರು ಈಗ ಜಮಾಹತ್ ಮತ್ತು ಕಾನೂನು ಮೊರೆ ಹೋಗಿದ್ದಾರೆ. ಇನ್ನು ಆತನ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸಿ ಅಂತಾ ಕೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!