Wednesday, July 29, 2026
Homeಕರಾವಳಿಮಂಗಳೂರುವಿಟ್ಲ; ಕ್ರಿಕೆಟ್ ಆಡಿ ಮುಗಿಸಿದ ಬೆನ್ನಲ್ಲೇ ತೀವ್ರ ಎದೆನೋವುಬಹರೈನ್‌ನಿಂದ ವಾರದ ಹಿಂದೆ ಬಂದಿದ್ದ ವ್ಯಕ್ತಿ ಸಾವು

ವಿಟ್ಲ; ಕ್ರಿಕೆಟ್ ಆಡಿ ಮುಗಿಸಿದ ಬೆನ್ನಲ್ಲೇ ತೀವ್ರ ಎದೆನೋವುಬಹರೈನ್‌ನಿಂದ ವಾರದ ಹಿಂದೆ ಬಂದಿದ್ದ ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ; ಬಹರೈನ್‌ನಿಂದ ವಾರದ ಹಿಂದಷ್ಟೇ ಊರಿಗೆ ಬಂದಿದ್ದ ವ್ಯಕ್ತಿಯೊಬ್ಬರು ಸ್ನೇಹಿತರೊಂದಿಗೆ ಕ್ರಿಕೆಟ್ ಆಡಿ ಮುಗಿಸಿದ ಕೆಲವೇ ಕ್ಷಣಗಳಲ್ಲಿ ತೀವ್ರ ಎದೆನೋವಿನಿಂದ ಮೃತಪಟ್ಟ ಘಟನೆ ಜುಲೈ 26ರಂದು ನಡೆದಿದೆ.

ಕೇಪು ಗ್ರಾಮದ ಬೆಂಗ್ರೋಡಿ ನಿವಾಸಿ ದಿವಾಕರ ಶೆಟ್ಟಿ (52) ಮೃತಪಟ್ಟ ದುರ್ದೈವಿ. ಬಹರೈನ್‌ನ ರೆಸ್ಟೋರೆಂಟ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ಇವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಜುಲೈ 26ರಂದು ಚಂದಳಿಕೆಯ ಇಂಡೋರ್ ಗ್ರೌಂಡ್‌ನಲ್ಲಿ ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಕ್ರಿಕೆಟ್ ಆಡಿ ಮನೆಗೆ ಮರಳಲು ಸಿದ್ಧರಾಗುತ್ತಿದ್ದಾಗ ಇವರಿಗೆ ದಿಢೀರ್ ಎದೆನೋವು ಕಾಣಿಸಿಕೊಂಡಿದೆ.

ತಕ್ಷಣವೇ ವಿಟ್ಲದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಒಯ್ಯಲಾಯಿತಾದರೂ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಪುತ್ರ ಹಾಗೂ ತಂದೆ-ತಾಯಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!