- Advertisement -
- Advertisement -
ಕಾರ್ಕಳ,: ರಬ್ಬರ್ ಮರದಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಕಾರ್ಕಳದ ಕಲ್ಯಾ ಗ್ರಾಮದ ಅಶೋಕನಗರದ ಕೋಟಿಬೆಟ್ಟು ಎಂಬಲ್ಲಿ ನಡೆದಿದೆ.
ತ್ರಿಪುರ ರಾಜ್ಯದ ಅವಯ್ ಮಂಜ ದೆಬ್ರಮ್(34) ಮೃತ ವ್ಯಕ್ತಿ. ಈತ ಕಳೆದ 3 ತಿಂಗಳಿನಿಂದ ಕೋಟಿಬೆಟ್ಟುವಿನ ಬಿಜು ಎಂಬವರ ರಬ್ಬರ್ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ಎ.29ರಂದು ರಬ್ಬರ್ ಮರದಿಂದ ಆಕಸ್ಮಿಕವಾಗಿ ಬಿದ್ದಿದ್ದರೆನ್ನಲಾಗಿದೆ.
ಇದರಿಂದ ಗಂಭೀರವಾಗಿ ಗಾಯ ಗೊಂಡಿದ್ದ ಇವರು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
- Advertisement -