- Advertisement -
![]()
- Advertisement -
ಉಡುಪಿ; ಮೀನು ಖಾಲಿ ಮಾಡುವಾಗ ಆಯ ತಪ್ಪಿ ನೀರಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ರವಿ ಟಿ ಸಾಲ್ಯಾನ್ (51) ಮೃತ ದುರ್ದೈವಿ.
ರವಿ ಟಿ ಸಾಲ್ಯಾನ್ ಅವರು ಖಾಲಿ ಮಾಡುವ ಕೆಲಸ ಮಾಡಿಕೊಂಡಿದ್ದರು. ನ.21 ರಂದು 10:50 ಗಂಟೆಗೆ ಮಲ್ಪೆ ದಕ್ಕೆಯಲ್ಲಿ ಜಯಮಂಗಳ ಬೋಟ್ನಲ್ಲಿ ಮೀನು ಖಾಲಿ ಮಾಡುವಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಅಲ್ಲಿದ್ದವರು ಕೂಡಲೇ ಅವರನ್ನು ಮೇಲಕ್ಕೆ ಎತ್ತಿ ಉಪಚರಿಸಿ ಅಂಬ್ಯುಲೆನ್ಸ್ನಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿ 11:15 ಗಂಟೆಗೆ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂಬುವುದಾಗಿ ದೃಢಪಡಿಸಿದ್ದಾರೆ.
- Advertisement -


