Friday, June 27, 2025
Homeಕರಾವಳಿಬೆಳ್ತಂಗಡಿ: ಮಾನಸಿಕ ಚಂಚಲತೆಯಿಂದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ !

ಬೆಳ್ತಂಗಡಿ: ಮಾನಸಿಕ ಚಂಚಲತೆಯಿಂದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ !

spot_img
- Advertisement -
- Advertisement -

ಬೆಳ್ತಂಗಡಿ: ಕಸಬಾ ಗ್ರಾಮದ ಚರ್ಚ್ ರೋಡ್ ಎಂಬಲ್ಲಿ ವ್ಯಕ್ತಿ ಓರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿನೋದ್(44) ಮೃತ ವ್ಯಕ್ತಿ. ಇವರು ಅರ್ಕಿಬಡ್ಕಿ ಮನೆ, ಶಿರ್ಲಾಲು ಗ್ರಾಮ ಬೆಳ್ತಂಗಡಿ ತಾಲೂಕು ನಿವಾಸಿ. ಮೀನಾಕ್ಷಿ ಎಂಬುವರನ್ನು ಸುಮಾರು 14 ವರ್ಷಗಳ ಹಿಂದೆ ವಿವಾಹವಾಗಿದ್ದ ಇವರು ವಿಪರೀತ ಅಮಲು ಪದಾರ್ಥ ಸೇವನೆ ಮಾಡುವ ಅಭ್ಯಾಸ ಹೊಂದಿದ್ದರು. ಮದ್ಯ ಸೇವನೆ ಮಾಡಿದ ಸಮಯ ತಾನು ಸಾಯುವುದಾಗಿ ಹೇಳುತ್ತಿದ್ದರು, ಮೀನಾಕ್ಷಿ ಅವರು 5 ದಿನಗಳ ಹಿಂದೆ ತವರು ಮನೆಗೆ ಹೋಗಿದ್ದು, ಗಂಡನೊಂದಿಗೆ ಫೋನ್ ಸಂಪರ್ಕದಲ್ಲಿದ್ದರು.

ಗಂಡ ವಿನೋದ್ ಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಬರುತ್ತಿದ್ದು, ಬಳಿಕ ಎಷ್ಟೇ ಕರೆ ಮಾಡಿದರೂ ಕರೇ ಸ್ವೀಕರಿಸದೇ ಇದ್ದುದರಿಂದ ಈ ಮನೆಗೆ ಬಂದು ನೋಡಿದಾಗ ಈಕೆಯ ಗಂಡ ಬಚ್ಚಲು ಕೋಣೆಯ ಮಾಡಿನ ಅಡ್ಡಕ್ಕೆ ಚೂಡಿದಾರದ ವೇಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ಮೃತ ವಿನೋದ್ ರವರು ಅವರಿಗಿದ್ದ ಮಾನಸಿಕ ಚಂಚಲತೆ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!