ಮಧ್ಯಪ್ರದೇಶ: ಇಲ್ಲಿನ ರಾಜ್ ಘರ್ ಜಿಲ್ಲೆಯ ಪಟಾಂಕಲಾನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೊರೊನಾ ಲಸಿಕೆಯ ಬೇಡ ಎಂದು ಮರವೇರಿ ಕುಳಿತಿದ್ದು, ಆ ದಿನದ ಕೋವಿಡ್ ಲಸಿಕೆ ಶಿಬಿರ ಪೂರ್ಣಗೊಳ್ಳುವವರೆಗೂ ಕೆಳಗಿಳಿಯಲು ನಿರಾಕರಿಸಿದ್ದಾನೆ.
ನನಗೆ ಮತ್ತು ನನ್ನ ಹೆಂಡತಿಗೆ ಲಸಿಕೆ ಬೇಡ ಎನ್ನುತ್ತಾ ಪತ್ನಿಯ ಆಧಾರ್ ಕಾರ್ಡ್ ಹಿಡಿದು ಮರವೇರಿ ಕುಳಿತಿದ್ದಾನೆ. ಅಂದ್ಹಾಗೆ, ಇಂದು ಕೋವಿಡ್ ಲಸಿಕೆ ಶಿಬಿರ ನಡೆಸಲು ಆರೋಗ್ಯ ಇಲಾಖೆ ತಂಡ ಗ್ರಾಮ ತಲುಪಿದ್ದು, ಗ್ರಾಮಸ್ಥರೆಲ್ಲರನ್ನು ಲಸಿಕೆ ಕೇಂದ್ರಕ್ಕೆ ಕರೆಸಲಾಯಿತು. ಅದ್ರಂತೆ, ಗ್ರಾಮದ ನಿವಾಸಿ ಕನ್ವರ್ ಲಾಲ್ ಕೂಡ ಕೇಂದ್ರಕ್ಕೆ ಆಗಮಿಸಿದರು. ಆದ್ರೆ, ಲಸಿಕೆಗಳನ್ನ ನೀಡುವುದನ್ನ ಕಂಡು ಭಯಭೀತರಾದ ಅವ್ರು ಡೋಸ್ ತೆಗೆದುಕೊಳ್ಳಲು ನಿರಾಕರಿಸಿದರು.
ಕನ್ವರ್ ಲಾಲ್ ಲಸಿಕೆ ಕೇಂದ್ರದ ಬಳಿ ಇರುವ ಮರವನ್ನ ಹತ್ತಿ, ದಿನದ ಲಸಿಕೆ ಶಿಬಿರ ಪೂರ್ಣಗೊಳ್ಳುವವರೆಗೂ ಅಲ್ಲಿಯೇ ಕುಳಿತಿದ್ದಾನೆ. ಆತನ ಹೆಂಡತಿ ಲಸಿಕೆಯನ್ನ ತೆಗೆದುಕೊಳ್ಳಲು ಒಪ್ಪಿದರೂ, ಆಕೆಯ ಆಧಾರ್ ಕಾರ್ಡ್ ನೀಡಲು ನಿರಾಕರಿಸಿ, ಲಸಿಕೆ ಹಾಕಿಸಿಕೊಳ್ಳಬೇಡ ಎಂದು ಒತ್ತಾಯಿಸಿದ್ದಾನೆ.
ಘಟನೆಯ ಸುದ್ದಿ ತಿಳಿದು ಖುಜ್ನರ್ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ. ರಾಜೀವ್ ಅವರು ಗ್ರಾಮಕ್ಕೆ ಭೇಟಿ ನೀಡಿ, ಕನ್ವರ್ ಲಾಲ್ʼನೊಂದಿದೆ ಸಮಾಲೋಚನೆ ನಡೆಸಿದರು. ನಂತ್ರ ಮಾತನಾಡಿದ ಅವ್ರು ‘ಸಮಾಲೋಚನೆಯ ನಂತರ, ವ್ಯಕ್ತಿಯಲ್ಲಿರುವ ಆತಂಕ ದೂರವಾಗಿದೆ. ಈಗ, ಮುಂದಿನ ಬಾರಿ ತಮ್ಮ ಹಳ್ಳಿಯಲ್ಲಿ ಲಸಿಕೆ ಶಿಬಿರ ನಡೆದಾಗ ಕನ್ವರ್ ಲಾಲ್ ಮತ್ತು ಅವರ ಪತ್ನಿಗೆ ಲಸಿಕೆ ನೀಡಲಾಗುವುದು’ ಎಂದರು.