ಮಡಂತ್ಯಾರು : ಕೊರೊನಾ ಸೊಂಕು ದೇಶದಲ್ಲಿ ಹರಡುವ ಲಕ್ಷಣಗಳು ಕಂಡು ಬಂದ ಕೂಡಲೇ ಎಲ್ಲಾ ವ್ಯವಹಾರ ಕೇಂದ್ರ ಗಳಲ್ಲಿ ಹಾಗೂ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸ್ಯಾನಿಟೈಸರ್ ಇಡುವಂತೆ ಸರಕಾರ ಅದೇಶ ನೀಡಿತ್ತು.
ಸ್ಯಾನಿಟೈಸರ್ ಬಳಸದೆ ವ್ಯವಹಾರ ಕೇಂದ್ರ ದ ಒಳಗೆ ಹೋಗುವಂತಿಲ್ಲ ಮತ್ತು ಕಡ್ಡಾಯವಾಗಿ ಸ್ಯಾನಿಟೈಸರ್ ಪ್ರತಿಯೊಂದು ಕಚೇರಿಯ ಲ್ಲಿಯೂ ಇರಲೇಬೇಕು ಎಂಬ ತಾಕೀತು ಸರಕಾರ ಮಾಡಿದೆ.
ಆದರೆ ಇಲ್ಲಿ ಒಂದು ಕಡೆ ಬ್ಯಾಂಕಿನ ಎ.ಟಿ.ಎಂ.ಕೇಂದ್ರದೊಳಗೆ ಹಣ ಪಡಯಲು ಹೋಗುವವರಿಗೆ ಏನು ಇಟ್ಟಿದ್ದಾರೆ ಗೊತ್ತಾ? ಸ್ಯಾನಿಟೈಸರ್ ಬದಲು ಬಾಟಲಿಯೊಳಗೆ ಪಿನಾಯಿಲ್ ತುಂಬಿಸಿಟ್ಟಿದ್ದಾರೆ ಎಂದು ಗ್ರಾಹಕರು ಆರೋಪ ವ್ಯಕ್ತಪಡಿಸಿದ್ದಾರೆ.
ಮಡಂತ್ಯಾರು ಎಂಬಲ್ಲಿ ಕಾರ್ಯಚರಿಸುತ್ತಿರುವ ಸರಕಾರಿ ಪ್ರಾಯೋಜಿತ ಸಂಸ್ಥೆಯಾದ ಈ ಬ್ಯಾಂಕ್ ಗೆ ಸಂಬಂಧಿಸಿದ ಎ.ಟಿ.ಎಂ.ಕೇಂದ್ರದೊಳಗೆ ಹಣ ಪಡೆಯಲು ಅಗಮಿಸುವ ಗ್ರಾಹಕರು ಸ್ಯಾನಿಟೈಸರ್ ಎಂದು ಕೈಗೆ ಹಾಕಿಕೊಂಡರೆ ಅದು ಪಿನಾಯಿಲ್ ಅಗಿದೆ ಎಂದು ಗ್ರಾಹಕರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಚೇರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇವರ ಆರೋಪವಾಗಿದೆ. ಈ ಬಗ್ಗೆ ಸ್ಥಳೀಯ ಆಡಳಿತ ಗಮನಹರಿಸಿ ಅದನ್ನು ಕೈಗಳಿಗೆ ಹಚ್ಚಬಹುದೇ ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ.