- Advertisement -
- Advertisement -
ಮಂಗಳೂರು: ಪ್ರೇಯಸಿ ಔಟಿಂಗ್ ಗೆ ಕರೆದಾಗ ಬರಲಿಲ್ಲ ಎಂದು ಕೋಪಗೊಂಡ ಯುವಕನೋರ್ವ ಯುವತಿ ಕೆಲಸ ಮಾಡುತ್ತಿದ್ದ ಕಟ್ಟಡದ ಮೇಲೆ ಕಲ್ಲು ತೂರಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರು ನಗರದ ಸೆಂಟ್ ಆಗ್ನೇಸ್ ಕಾಲೇಜು ಎದುರಿನಲ್ಲಿ ಈ ಘಟನೆ ನಡೆದಿದ್ದು ಸುಳ್ಯ ಮೂಲದ ವಿವೇಕ್ (18) ಎಂಬಾತ ಈ ಕೃತ್ಯ ಎಸಗಿದ್ದಾನೆ.
ವಿವೇಕ್ ಪ್ರಿಯತಮೆಯಾಗಿದ್ದ ಯುವತಿ ಸುರೇಶ್ ಶೆಟ್ಟಿ ಎಂಬುವವರ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದು ನಿನ್ನೆ ಸಂಜೆ ವಿವೇಕ್ ಹೊರಗಡೆ ತೆರಳಲು ಕರೆದಾಗ ಬರಲು ಒಪ್ಪಿರಲಿಲ್ಲ ಎನ್ನಲಾಗಿದೆ.ಇದರಿಂದಾಗಿ ಸಿಟ್ಟಿಗೆದ್ದಿದ್ದ ವಿವೇಕ್ ಯುವತಿ ಕೆಲಸ ಮಾಡುತ್ತಿದ್ದ ಪಿಜಿ ಮೇಲೆ ಕಲ್ಲು ಎಸೆದು ಗಾಜು ಪುಡಿಯಾಗಿದೆ.ಕಟ್ಟಡದ ಮೇಲೆ ಕಲ್ಲು ತೂರಿದ ಯುವಕ ವಿವೇಕ್ ಗೆ ಸಾರ್ವಜನಿಕರು ಥಳಿಸಿದ್ದಾರೆ.
- Advertisement -