Friday, May 3, 2024
Homeಕರಾವಳಿಬೆಳ್ತಂಗಡಿ : ಗಾಂಜಾ ಸೇವಿಸಿ ವಾಹನ ಅಪಘಾತ ಬಳಿಕ ಚಾಲಕನ ಕಿರಿಕ್ : ಚಾಲಕನ ಮೇಲೆ...

ಬೆಳ್ತಂಗಡಿ : ಗಾಂಜಾ ಸೇವಿಸಿ ವಾಹನ ಅಪಘಾತ ಬಳಿಕ ಚಾಲಕನ ಕಿರಿಕ್ : ಚಾಲಕನ ಮೇಲೆ ಸ್ಥಳೀಯರಿಂದ ಹಿಗ್ಗಾಮುಗ್ಗಾ ಥಳಿತ; ಚಾಲಕ ಶೌಕತ್ ಅಲಿ ಮೇಲೆ ಬಿತ್ತು ಎರಡು ಪ್ರಕರಣ

spot_img
- Advertisement -
- Advertisement -

ಬೆಳ್ತಂಗಡಿ : ಗಾಂಜಾ ಸೇವಿಸಿ ಮಹಿಳೆಯ ಸ್ಕೂಟರ್ ಗೆ ಅಪಘಾತ ನಡೆಸಿದ್ದು. ಪ್ರಶ್ನಿಸಿದ ಸ್ಥಳೀಯರ ಮೇಲೆ ಹಲ್ಲೆಗೆ ಯತ್ನಿಸಿದ ಮೀನು ಸಾಗಾಟದ ಗೂಡ್ಸ್ ವಾಹನದ ಚಾಲಕನ ಮೇಲೆ ಸಾರ್ವಜನಿಕರು ಹಿಗ್ಗಮುಗ್ಗ ಥಳಿಸಿದ ಘಟನೆ ಅ.2 ರಂದು  ಉಜಿರೆಯಲ್ಲಿ ನಡೆದಿದೆ. ಕೊನೆಗೆ ತಾನೇ ಅಪಘಾತದ ವಿಚಾರದಲ್ಲಿ ಸಾರ್ವಜನಿಕರು ನನಗೆ ಹಲ್ಲೆ ಮಾಡಿದ್ದಾರೆ ಎಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಪೊಲೀಸರಿಗೆ ದೂರು ನೀಡಿದ್ದ ನಂತರ ಆತನನ್ನು ಆಸ್ಪತ್ರೆಗೆ ಭೇಟಿ ಮಾಡಿದ್ದ ಬೆಳ್ತಂಗಡಿ ಪೊಲೀಸರಿಗೆ ಗಾಂಜಾ ಸೇವನೆ ಮಾಡಿರುವ ಬಗ್ಗೆ ವಾಸನೆ ಬಂದಿದ್ದು ಇದರಿಂದ ಅನುಮಾನದಿಂದ ವೈದ್ಯರಲ್ಲಿ ರಕ್ತ ಪರೀಕ್ಷೆ ಮಾಡಿಸಿ ಲ್ಯಾಬ್ ಗೆ ಕಳುಹಿಸಿದಾಗ ಗಾಂಜಾ ಸೇವನೆ ಮಾಡಿದ್ದು ದೃಢ ಪಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆ‌ ಚಾರ್ಮಾಡಿ ರಸ್ತೆಯ ಸುಝುಕಿ ಶೋಂ ಬಳಿ ಇರುವ ಮೀನು ಮಾರಾಟ ಅಂಗಡಿಗೆ ಮಂಗಳೂರು ಬಂದರಿನಿಂದ ಮೀನು ಸಾಗಾಟ ಮಾಡುತ್ತಿದ್ದ KA-70-5343 ಸಂಖ್ಯೆಯ ಗೂಡ್ಸ್ ವಾಹನ ಚಾಲಕ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಟದಗುಡ್ಡೆ ನಿವಾಸಿ ಹಂಝ ಎಂಬವರ ಮಗ ಶೌಕತ್ ಆಲಿ (24) ಗಾಂಜಾ ಸೇವಿಸಿಕೊಂಡು ಬಂದು ನಿಲ್ಲಿಸಿದ್ದ ಮಹಿಳೆಯೊಬ್ಬರ ಕಾರಿಗೆ ಡಿಕ್ಕಿ ಹೊಡೆದು ಅವರ ಜೊತೆ ಕಿರಿಕ್ ನಡೆಸುತ್ತಿದ್ದ ಈ ವೇಳೆ ಸ್ಥಳಕ್ಕೆ ಬಂದ ಸಾರ್ವಜನಿಕರು ಸಮಾಧಾನ ಪಡಿಸಿದಾಗ ಚಾಲಕ ಕೋಪಗೊಂಡು ಅವ್ಯಾಚ ಶಬ್ದಗಳಿಂದ ಬೈದು ಗೂಡ್ಸ್ ವಾಹನದಲ್ಲಿದ್ದ ರಾಡ್ ತೆಗೆದು ಹಲ್ಲೆಗೆ ಯತ್ನಿಸಿದಾಗ ಸಾರ್ವಜನಿಕರು ಸೇರಿ ಹಿಗ್ಗಮುಗ್ಗ ಥಳಿಸಿದ್ದಾರೆ. ಬಳಿಕ ಮೀನು ಅಂಗಡಿಯಲ್ಲಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಸ್ಥಳಕ್ಕೆ ಬಂದ ಬೆಳ್ತಂಗಡಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಚಾಲಕ ಶೌಕರ್ ಅಲಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದ್ದು. ಚಾಲಕನ ಮೇಲೆ ಗಾಂಜಾ ಸೇವಿಸಿದ ಬಗ್ಗೆ ವೈದ್ಯರು ನೀಡಿದ ಪರೀಕ್ಷಾ ದೃಢ ಪತ್ರ ವರದಿ ಆಧಾರದಲ್ಲಿ ಮತ್ತು ಮಹಿಳೆಯ ಮಾನಭಂಗ ಯತ್ನ ಸೇರಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ‌.

ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ:ಗಾಂಜಾ ಸೇವಿಸಿ ವಾಹನ ಚಾಲಯಿಸಿಕೊಂಡು ಬರುವಾಗ ನಿಲ್ಲಿಸಿದ ಮಹಿಳೆಯ ಕಾರಿಗೆ ಡಿಕ್ಕಿ ಹೊಡೆದಿದ್ದು ಇದನ್ನು ಪ್ರಶ್ನಿಸಿ ಸಾರ್ವಜನಿಕರ ಮೇಲೆ ರಾಡ್ ತೆಗದು ಹಲ್ಲೆಗೆ ಮುಂದದಾಗ ಸಾರ್ವಜನಿಕರು ಹಿಡಿದು ಹಿಗ್ಗಮುಗ್ಗ ಥಳಿಸಿದ್ದಾರೆ. ಬಳಿಕ ಶೌಕರ್ ಅಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಲ್ಲೆ ಮಾಡಿದ ಬಗ್ಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿದ್ದು. ಈ ಪ್ರಕರಣ ಸಂಬಂಧಿಸಿದಂತೆ ಮೂವರು ಯುವಕರಾದ ನಾಗೇಶ್, ಪ್ರವೀಣ್ , ವಿನಯ್ ಎಂಬತನನ್ನು ಬಂಧಿಸಿದ್ದು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಪಕ್ಕದಲ್ಲಿ ಅಂಗಡಿಯ ಮಹಿಳೆ ಮಾನಭಂಗ ಯತ್ನ:ಗಾಂಜಾ ಸೇವಿಸಿದ ಮತ್ತಿನಲ್ಲಿ ಆರೋಪಿ ಅಂಗಡಿಯ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದ ಈ ಬಗ್ಗೆ ಮಹಿಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅದರಂತೆ ಆರೋಪಿ ಶೌಕತ್ ಅಲಿ ಮೇಲೆ ಪ್ರಕರಣ ದಾಖಲಾಗಿದೆ. ಮಾಹಿತಿ ಪ್ರಕಾರ ಆರೋಪಿ ಶೌಕತ್ ಅಲಿ ಗಾಂಜಾ ಮಾರಾಟಗಾರ ಹಾಗೂ ವ್ಯಸನಿಕೂಡ ಅಗಿದ್ದಾನೆ ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

SDPI ಯಿಂದ ಸುಳ್ಳು ಮಾಹಿತಿ ವೈರಲ್ :ಪ್ರಕರಣದ ಬಗ್ಗೆ ಮಾಹಿತಿ ಪಡೆದ SDPI ಸಂಘಟನೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಂಜಾ ವ್ಯಸನಿ ಶೌಕತ್ ಅಲಿ ಯನ್ನು ಭೇಟಿ ಮಾಡಿ ಆತನ ಫೋಟೋ ತೆಗೆದು ಸಂಘಪರಿವಾರದಿಂದ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂದು SDPI ಬೆಳ್ತಂಗಡಿ ನಿಯೋಗ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿದ್ದರು. ನಂತರ ಶೌಕತ್ ಅಲಿ ಗಾಂಜಾ ಸೇವಿಸಿ ಅಪಘಾತ ಮಾಡಿ ಕಿರಿಕ್ ಮಾಡಿದ್ದಕ್ಕೆ ಹಿಗ್ಗಮುಗ್ಗ ಥಳಿಸಿದ ನೈಜ ವಿಚಾರ ತಿಳಿಯುತ್ತಿದ್ದಂತೆ SDPI ಸಂಘಟನೆ ನಾಪತ್ತೆಯಾಗಿದೆ.

- Advertisement -
spot_img

Latest News

error: Content is protected !!