- Advertisement -
- Advertisement -
ಬೆಳ್ತಂಗಡಿ : ಉಜಿರೆಯ ಲಾರಿ ಚಾಲಕನ ವೇಗ ಹಾಗೂ ನಿರ್ಲಕ್ಷ್ಯ ಚಾಲನೆಗೆ ಲಾರಿಯಡಿಗೆ ಸಿಲುಕಿ ಬಸ್ ಗಾಗಿ ಕಾಯುತಿದ್ದ ಇಬ್ಬರು ಬಲಿಯಾದ ಘಟನೆ ಉಜಿರೆ ಸಮೀಪ ಫೆ.4 ರಂದು(ಇಂದು) ನಡೆದಿದೆ.
ಉಜಿರೆ ಸಮೀಪದ ಗಾಂಧಿನಗರ ತಿರುವು ಬಳಿ ಬಸ್ ಗಾಗಿ ಅಪರಿಚಿತ ಪುರುಷ ಹಾಗೂ ಮಹಿಳೆ ರಸ್ತೆ ಬದಿ ನಿಂತಿದ್ದ ವೇಳೆ ಫೆ.4 ರಂದು ಭಾನುವಾರ ಉಜಿರೆ ಕಡೆಯಿಂದ ತಿರುವಿನಲ್ಲಿ ಅತೀ ವೇಗವಾಗಿ ಬಂದ ಲಾರಿ ಇಬ್ಬರಿಗೆ ಡಿಕ್ಕಿ ಹೊಡೆದದ್ದಲ್ಲದೆ ವಿದ್ಯುತ್ ಕಂಬ ಸಮೀಪದ ಕಟ್ಟಡಕ್ಕೆ ಹಾನಿಯುಂಟಾಗಿದೆ.
ಸಾವನ್ನಪ್ಪಿದವರ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು. ರಸ್ತೆಯಲ್ಲಿ ವಾಹನ ಸಂಚಾರ ಬ್ಲಾಕ್ ಆಗಿದೆ.
- Advertisement -