Wednesday, September 27, 2023
Homeತಾಜಾ ಸುದ್ದಿಲಾಕ್ ಡೌನ್ ಸಡಿಲಿಕೆ ಕುರಿತಂತೆ ಕ್ಯಾಬಿನೆಟ್ ಮೀಟಿಂಗ್: ಸಭೆಗೆ ಹೋಂ ಕ್ವಾರೆಂಟೈನ್ ನಲ್ಲಿರುವ ನಾಲ್ವರು ಸಚಿವರು...

ಲಾಕ್ ಡೌನ್ ಸಡಿಲಿಕೆ ಕುರಿತಂತೆ ಕ್ಯಾಬಿನೆಟ್ ಮೀಟಿಂಗ್: ಸಭೆಗೆ ಹೋಂ ಕ್ವಾರೆಂಟೈನ್ ನಲ್ಲಿರುವ ನಾಲ್ವರು ಸಚಿವರು ಗೈರು

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಮೇ.3ರ ಬಳಿಕ ಲಾಕ್ ಡೌನ್ ವಿಸ್ತರಿಸುವ ಕುರಿತಂತೆ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಈ ಸಭೆಗೆ ಹೋಂ ಕ್ವಾರೆಂಟೈನ್ ನಲ್ಲಿರುವ ಸಚಿವರು ಗೈರಾಗಲಿದ್ದಾರೆ.

ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೇ.3ರ ಬಳಿಕ ಲಾಕ್ ಡೌನ್ ನಿಂದ ಸಡಿಲಿಕೆ ನೀಡುವ ಸಂಬಂಧ ಮಹತ್ವದ ಚರ್ಚೆ ನಡೆಯಲಿದೆ. ಸದ್ಯದ ಲಾಕ್ ಡೌನ್ ನಿಂದಾಗಿ ರಾಜ್ಯದ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ಮೇ.3ರ ಬಳಿಕ ಹಸಿರು ಹಾಗೂ ಆರೆಂಜ್ ವಲಯಗಳಲ್ಲಿ ಅರಣ್ಯ, ಕೃಷಿ, ಆಹಾರ, ರಫ್ತು ಆಧಾರಿತ ಉದ್ಯಮ ಸೇರಿದಂತೆ ಇತರೇ ಕ್ಷೇತ್ರಗಳಿಗೆ ಆದ್ಯತೆ ನೀಡುವ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಮಾಧ್ಯಮ ಸಿಬ್ಬಂದಿಯೊಬ್ಬರಿಗೆ ಮಾರಕ ಕೊರೊನಾ ಸೋಂಕು ದಋಪಟ್ಟಿರುವ ಹಿನ್ನೆಲೆಯಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ಸಚಿವರಾದ ಬಸವರಾಜ ಬೊಮ್ಮಾಯಿ, ಅಶ್ವತ್ಥ್ ನಾರಾಯಣ್, ಡಾ.ಕೆ.ಸುಧಾಕರ್, ಸಿ.ಟಿ.ರವಿ ಸದ್ಯ ಹೋಂ ಕ್ವಾರೆಂಟೈನ್ ನಲ್ಲಿದ್ದು, ಇಂದಿನ ಕ್ಯಾಬಿನೆಟ್ ಮೀಟಿಂಗ್ ಗೆ ಗೈರಾಗಲಿದ್ದಾರೆ.

- Advertisement -
spot_img

Latest News

error: Content is protected !!