- Advertisement -
- Advertisement -
ಮಣಿಪಾಲ: ರಜನಿ ಎಂಬುವವರು ತಮ್ಮ ಪತಿ ರಸ್ತೆಯಲ್ಲಿ ಅಡ್ಡಕಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ರಜನಿ ಅವರು 14 ವರ್ಷಗಳ ಹಿಂದೆ ದಯಾನಂದ ಎಂಬುವರ ಜೊತೆ ವಿವಾಹವಾಗಿದ್ದು , ಸುಮಾರು 5-6 ವರ್ಷಗಳಿಂದ ಗಂಡನಿಂದ ಬೇರೆಯಾಗಿದ್ದು , ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು .
ಈ ನಡುವೆ ರಜನಿ ಕೆಲಸ ಮಾಡುವ ಸ್ಥಳಕ್ಕೆ ಬಂದ ದಯಾನಂದ ಸಾರ್ವಜನಿಕ ರಸ್ತೆಯಲ್ಲಿ ರಜನಿ ಅವರನ್ನು ಅಡ್ಡಕಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -