- Advertisement -
- Advertisement -
ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಿಹಾರದ ಬಗಲಪುರ ತಾಲೂಕು ನಿವಾಸಿಯಾಗಿರುವ ಮಹಿಳೆ ಕೂಲಿ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದು, ತಮ್ಮ ಪತಿ ನೀರಜ್ ಚೌಧರಿಯೊಂದಿಗೆ ಪಚ್ಚನಾಡಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಜುಲೈ 14 ರಂದು ಸುಭದ್ರಾದೇವಿ ತಮ್ಮ ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳುವುದಾಗಿ ಹೇಳಿ ಹೋಗಿದ್ದರು.
ಆದರೆ, ಅವರು ಬೆಂಗಳೂರಿಗೂ ಹೋಗದೆ, ತಮ್ಮ ಸ್ವಂತ ಊರಿಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಅವರ ಪತಿ ಮಂಗಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
- Advertisement -