- Advertisement -
- Advertisement -
ಮೂಡಬಿದ್ರಿ: ಕೊಡಮಣಿತ್ತಾಯ ದೈವದ ಮುಕ್ಕಾಲ್ದಿಯಾಗಿ ತುಳುನಾಡಿನ ಅನೇಕ ದೈವಸ್ಥಾನಗಳಲ್ಲಿ ಚಾಕರಿ ಮಾಡಿದ ಲಾಡಿ ಅಣ್ಣು ಶೆಟ್ಟಿ (78 ವ) ಅವರು ವಯೋ ಸಹಜ ಅಲ್ಪ ಕಾಲದ ಅಸೌಕ್ಯದಿಂದ ಇಂದು ಮುಂಜಾನೆ ಮೂಡಬಿದ್ರೆಯ ಸ್ವಗೃಹದಲ್ಲಿ ದೈವಾಧೀನರಾದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಶ್ರೀ ಕೊಡಮಣಿತ್ತಾಯ ದೈವದ ಮುಕ್ಕಾಲ್ದಿಯಾಗಿ ಮತ್ತು ಹಿರಿಯ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರು.
ಸರಳ ಸಜ್ಜನಿಕೆಯ ಸ್ವಭಾವವನ್ನು ಹೊಂದಿದ್ದ ಇವರು ದೈವಾರಾಧನೆಯ ಕ್ಷೇತ್ರದಲ್ಲಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ,ಪುತ್ರ ಮತ್ತು ಪುತ್ರಿಯರನ್ನು ಅಗಲಿದ್ದಾರೆ.
- Advertisement -