Sunday, May 5, 2024
Homeತಾಜಾ ಸುದ್ದಿಅಪಘಾತದ‌ ಗಾಯಾಳುಗಳನ್ನು ಆಸ್ಪತ್ರೆ ಕರೆದೊಯ್ದು ತಾನೇ ಚಿಕಿತ್ಸೆ ನೀಡಿದ ಕುಣಿಗಲ್ ಶಾಸಕ

ಅಪಘಾತದ‌ ಗಾಯಾಳುಗಳನ್ನು ಆಸ್ಪತ್ರೆ ಕರೆದೊಯ್ದು ತಾನೇ ಚಿಕಿತ್ಸೆ ನೀಡಿದ ಕುಣಿಗಲ್ ಶಾಸಕ

spot_img
- Advertisement -
- Advertisement -

ತುಮಕೂರು: ಅಪಘಾತದಲ್ಲಿ ಗಾಯಗೊಂಡವರನ್ನು ಶಾಸಕರೇ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ನಡೆದಿದೆ.

ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಕಲ್ಲನಾಯಕನಹಳ್ಳಿ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಅಪಘಾತವಾಗಿ ಮೂವರಿಗೆ ಗಾಯವಾಗಿದ್ರೆ, ಒಬ್ಬರಿಗೆ ಗಂಭೀರ ಗಾಯವಾಗಿತ್ತು.

ಈ ಸಂಧರ್ಭದಲ್ಲಿ ಗಣೇಶೋತ್ಸವದಲ್ಲಿ ಭಾಗಿಯಾಗಿ ವಾಪಾಸಗುತ್ತಿದ್ದ ಕುಣಿಗಲ್ ಶಾಸಕ ಡಾ. ರಂಗನಾಥ್ ಅಪಘಾತಕ್ಕೀಡಾದವರನ್ನು ಕಂಡು ಕೂಡಲೇ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಸ್ವತ: ವೈದ್ಯರಾಗಿರುವ ಶಾಸಕ ಡಾ. ರಂಗನಾಥ್ ವೈದ್ಯರಿಗಾಗಿ ಕಾಯದೇ ತಾವೇ ಖುದ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.

ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಶಾಸಕ ರಂಗನಾಥ್ ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.

- Advertisement -
spot_img

Latest News

error: Content is protected !!