Sunday, June 29, 2025
Homeಕರಾವಳಿಉಪ್ಪಿನಂಗಡಿ: ನೂತನ ಎಸ್ಐ ಆಗಿ ಕುಮಾರ್ ಸಿ ಕಾಂಬ್ಳೆ ನೇಮಕ

ಉಪ್ಪಿನಂಗಡಿ: ನೂತನ ಎಸ್ಐ ಆಗಿ ಕುಮಾರ್ ಸಿ ಕಾಂಬ್ಳೆ ನೇಮಕ

spot_img
- Advertisement -
- Advertisement -

ಉಪ್ಪಿನಂಗಡಿ: ಈ ಹಿಂದೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಮಾರ್.ಸಿ.ಕಾಂಬ್ಳೆ ಯವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಪಿಎಸ್ಐ ಆಗಿ ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಹಾಗೆಯೆ ಉಪ್ಪಿನಂಗಡಿ ಠಾಣೆಯಲ್ಲಿ ತಮ್ಮ ಖಡಕ್ ತನಕ್ಕೆ ಜನ ಮಾನಸದಲ್ಲಿ ಉತ್ತಮ ಅಭಿಪ್ರಾಯ ಗಳಿಸಿರುವ ಪಿಎಸ್ಐ ಈರಯ್ಯ ರನ್ನು ವರ್ಗಾವಣೆ ಮಾಡಿದ್ದು, ಆದರೆ ಕರ್ತವ್ಯದ ಠಾಣೆ ಮತ್ತು ಜವಾಬ್ದಾರಿಯ ಮಾಹಿತಿಯನ್ನು ಈವರೆಗೆ ತಿಳಿಸಿಲ್ಲ.

ಜಿಲ್ಲೆಯ ಮತ್ತೊಬ್ಬ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದು, ಸಿಇಎನ್ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿದ್ದ ಕೊರಗಪ್ಪ ನಾಯ್ಕ್ ಅವರನ್ನು ಬಂಟ್ವಾಳ ಸಂಚಾರಿ ಠಾಣೆಗೆ ವರ್ಗಾವಣೆ ಮಾಡಿ ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾಗಿರುವ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.

- Advertisement -
spot_img

Latest News

error: Content is protected !!