Friday, June 27, 2025
Homeಕರಾವಳಿಸಾರ್ವಜನಿಕರ ಬೇಡಿಕೆಯಿಂದ ಅದ್ಯಪಾಡಿಗೆ ಬಂತು ಕೆಎಸ್ಸಾರ್ಟಿಸಿ ಬಸ್‌

ಸಾರ್ವಜನಿಕರ ಬೇಡಿಕೆಯಿಂದ ಅದ್ಯಪಾಡಿಗೆ ಬಂತು ಕೆಎಸ್ಸಾರ್ಟಿಸಿ ಬಸ್‌

spot_img
- Advertisement -
- Advertisement -

ಮಂಗಳೂರು: ಇಲ್ಲಿನ ಅದ್ಯಪಾಡಿ ಭಾಗದ ಸಾರ್ವಜನಿಕರು ಹಲವು ವರ್ಷಗಳಿಂದ ಸರ್ಕಾರಕ್ಕೆ ಇಟ್ಟಂತಹ ಬೇಡಿಕೆ ಇದೀಗ ನನಸಾಗಿದ್ದು, ಈ ಭಾಗದಲ್ಲಿ ಮಾ. 9ರಿಂದ ಕೆಎಸ್ಸಾರ್ಟಿಸಿ ಬಸ್‌ ಸಂಚರಿಸಲಿದೆ.

ಹೊಸ ಬಸ್‌ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣ ಮತ್ತು ಕಂಕನಾಡಿ ಮಾರುಕಟ್ಟೆಯಿಂದ ಅದ್ಯಪಾಡಿಗೆ ಸಂಚರಿಸಲಿದ್ದು, ಬಜಾಲ್‌ ಕ್ರಾಸ್‌, ಮರೋಳಿ ದೇವಸ್ಥಾನ, ಕಂಕನಾಡಿ ಮಾರುಕಟ್ಟೆ, ಜ್ಯೋತಿ, ಲಾಲ್‌ಬಾಗ್‌, ಕಾವೂರು, ಕೆಂಜಾರು ಮೂಲಕ ಅದ್ಯಪಾಡಿಗೆ ಸಂಚರಿಸಲಿದೆ ಎನ್ನಲಾಗುತ್ತಿದೆ.

ಬಸ್‌ ವೇಳಾಪಟ್ಟಿ ಹೀಗಿದೆ; ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣದಿಂದ ಬೆಳಗ್ಗೆ 6.10ಕ್ಕೆ ಹೊರಟು 7.10ಕ್ಕೆ ಅದ್ಯಪಾಡಿ ತಲುಪಲಿದ್ದು, ಅದ್ಯಪಾಡಿಯಿಂದ 7.20ಕ್ಕೆ ಹೊರಟು 8.20ಕ್ಕೆ ಮಂಗಳೂರು ಜಂಕ್ಷನ್‌ಗೆ ಬರಲಿದೆ.

8.45ಕ್ಕೆ ಜಂಕ್ಷನ್‌ನಿಂದ ಹೊರಟು 9.45ಕ್ಕೆ ಅದ್ಯಪಾಡಿ ತಲುಪಲಿದೆ. 10.10ಕ್ಕೆ ಅದ್ಯಪಾಡಿಯಿಂದ ಹೊರಟ ಬಸ್‌ 11.03ಕ್ಕೆ ಕಂಕನಾಡಿ ಮಾರುಕಟ್ಟೆ, 11.30ಕ್ಕೆ ಕಂಕನಾಡಿ ಮಾರುಕಟ್ಟೆಯಿಂದ ಹೊರಟು 12.23ಕ್ಕೆ ಅದ್ಯಪಾಡಿಗೆ ಬರಲಿದೆ.

12.40ಕ್ಕೆ ಅದ್ಯಪಾಡಿಯಿಂದ ಹೊರಟು 1.55ಕ್ಕೆ ಕಂಕನಾಡಿ ಮಾರುಕಟ್ಟೆ, 2.30ಕ್ಕೆ ಕಂಕನಾಡಿ ಮಾರುಕಟ್ಟೆಯಿಂದ ಹೊರಟು 3.23ಕ್ಕೆ ಅದ್ಯಪಾಡಿ, 3.40ಕ್ಕೆ ಅದ್ಯಪಾಡಿಯಿಂದ ಹೊರಟು 4.40ಕ್ಕೆ ಮಂಗಳೂರು ಜಂಕ್ಷನ್‌, 5 ಗಂಟೆಗೆ ಕಂಕನಾಡಿ ಜಂಕ್ಷನ್‌ನಿಂದ ಹೊರಟು 6 ಗಂಟೆಗೆ ಅದ್ಯಪಾಡಿ, 6.15ಕ್ಕೆ ಅದ್ಯಪಾಡಿಯಿಂದ ಹೊರಟು 7 ಗಂಟೆಗೆ ಕೆಎಸ್ಸಾರ್ಟಿಸಿ ತಲುಪಲಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!