- Advertisement -
- Advertisement -
ಪುತ್ತೂರು: ಸ್ನೇಹಿತರಿಂದಲೇ ಕೊಲೆಯಾದ ಕಲ್ಲೇಗ ಟೈಗರ್ಸ್ ರೂವಾರಿ ಅಕ್ಷಯ್ ಕಲ್ಲೇಗ ನಿವಾಸಕ್ಕೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಕ್ಷಯ್ ತಂದೆ ಚಂದ್ರಶೇಖರ್ ಗೆ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅಕ್ಷಯ್ ತಂದೆ ಚಂದ್ರಶೇಖರ್ ಮಗನನ್ನು ಕೊಂದವರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕೋಟ ಶ್ರೀನಿವಾಸ್ ಪೂಜಾರಿ ಅವರಲ್ಲಿ ಆಗ್ರಹಿಸಿದರು.
ಅಲ್ಲದೇ ತನ್ನ ಮಗನನ್ನು ಮಾಧ್ಯಮಗಳಲ್ಲಿ ರೌಡಿ ಶೀಟರ್ ಎಂದು ಬಿಂಬಿಸಲಾಗುತ್ತಿದೆ. ಆದರೆ ಆತ ಮಾಡಿದ ಉತ್ತಮ ಕೆಲಸಗಳನ್ನು ಯಾರೂ ಮಾತನಾಡುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
- Advertisement -