- Advertisement -
- Advertisement -
ಮಂಗಳೂರು: ನಂದಿಗುಡ್ಡೆ ಕೊರಗಜ್ಜನ ಕಟ್ಟೆಯನ್ನು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಡಿ .27 ರಂದು ರಾತ್ರಿ 11.40 ರ ಸುಮಾರಿಗೆ ಕೊರಗಜ್ಜನ ಕಟ್ಟೆಯ ಮೇಲೆ ಉಪಯೋಗಿಸಿದ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ್ದರು. ಕೂಡಲೇ ಸುತ್ತಮುತ್ತಲಿದ್ದ ಸಿಸಿಟಿವಿಯನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದಿದ್ದರು.
ಅದರ ಆಧಾರದ ಮೇಲೆ ಶಂಕಿತ ಓರ್ವನನ್ನು ವಶಕ್ಕೆ ಪಡೆದಿದ್ದು , ವಿಚಾರಣೆ ಮುಂದುವರೆದಿದೆ .
- Advertisement -