- Advertisement -
- Advertisement -
ಬೆಂಗಳೂರು: ನಟ ಕಿಚ್ಚ ಸುದೀಪ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 49ನೇ ವಸಂತಕ್ಕೆ ನಟ ಸುದೀಪ್ ಕಾಲಿಟ್ಟಿದ್ದಾರೆ. ಈ ಶುಭದಿನದಂದು ಪಶುಸಂಗೋಪನಾ ಇಲಾಖೆ ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾನ್ನಾಗಿ ನಟ ಕಿಚ್ಚ ಸುದೀಪ್ರನ್ನು ನೇಮಕ ಮಾಡಿದೆ.
ಈ ಕುರಿತಾಗಿ ಪಶು ಸಂಗೋಪನೆ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತವಾರಿ ಸಚಿವ ಪ್ರಭು ಬಿ. ಚವ್ಹಾಣ್ ನಟ ಕಿಚ್ಚ ಸುದೀಪ್ಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಸುದೀಪ್ ಅವರು ಯಾವುದೇ ಸಂಭಾವನೇ ಇಲ್ಲದೆ ಈ ಕೆಲಸ ನಿರ್ವಹಿಸುವುದಾಗಿ ಒಪ್ಪಿಕೊಂಡಿದ್ದಾರೆಂದು ಸಚಿವ ಪ್ರಭು ಬಿ. ಚೌಹಾಣ್ ಮಾಹಿತಿ ಹಂಚಿಕೊಂಡಿದ್ದಾರೆ.
- Advertisement -