ತಲೆ ಮೇಲೆ ಹಲಸಿನ ಹಣ್ಣು ಬಿದ್ದು ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದರೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದು ಎಲ್ಲರನ್ನು ಅತಂಕಕ್ಕೀಡು ಮಾಡಿದೆ.
ಕಾಸರಗೋಡು ಸಮೀಪದ ಬೆಳ್ಳೂರಿನ ಆಟೋ ಚಾಲಕನೊಬ್ಬ ಹಲಸಿನ ಹಣ್ಣು ಕೀಳಲು ಹೋದಾಗ ಒಂದು ಹಲಸಿನಹಣ್ಣು ಅವರ ತಲೆಯ ಮೇಲೆ ಬಿದ್ದಿತ್ತು. ಬೆನ್ನು ಮೂಳೆಗೆ ಗಾಯವಾಗಿದ್ದ ಅವರನ್ನು ಕಾಸರಗೋಡು ಜಿಲ್ಲಾ ಆಸ್ಪತ್ರೆಯಲ್ಲಿ ನಿಯಮಾವಳಿ ಪ್ರಕಾರ, ಶಸ್ತ್ರಚಿಕಿತ್ಸೆಗೂ ಮುನ್ನ ಅವರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಆದರೆ ಬೇರೆ ಊರುಗಳಿಗೆ ತೆರಳಿಲ್ಲ, ಬೇರೆ ಕಡೆಯಿಂದ ಬಂದವರ ಜೊತೆಯಲ್ಲೂ ಸಂಪರ್ಕದಲ್ಲಿಲ್ಲ. ಆದರೆ ಅವರು ಆಟೋ ಚಾಲಕರಾಗಿರುವುದರಿಂದ ಪ್ರಯಾಣಿಕರಿಂದ ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಅವರ ಕುಟುಂಬವನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ. ಕಳೆದ ಎರಡು ದಿನಗಳಿಂದ ಕೇರಳದಲ್ಲಿ 104 ಪ್ರಕರಣಗಳು ದಾಖಲಾಗಿವೆ.ಆದರೆ ಸಾಕಷ್ಟು ಮಂದಿಗೆ ಟ್ರಾವೆಲ್ ಹಿಸ್ಟರಿಯೂ ಇಲ್ಲ. ವಿದೇಶದಿಂದಲೂ ಬಂದಿಲ್ಲ.