Monday, June 30, 2025
Homeಕರಾವಳಿಉಡುಪಿಉಡುಪಿಯಲ್ಲಿ ಕರ್ನಾಟಕದ ಮೊದಲ ಸಂಚಾರಿ ಚಿತಾಗಾರ ಆರಂಭ

ಉಡುಪಿಯಲ್ಲಿ ಕರ್ನಾಟಕದ ಮೊದಲ ಸಂಚಾರಿ ಚಿತಾಗಾರ ಆರಂಭ

spot_img
- Advertisement -
- Advertisement -

ಉಡುಪಿ:  ಇಲ್ಲಿನ ಕುಂದಾಪುರ ತಾಲೂಕಿನ ಮುದೂರಿನಲ್ಲಿ ಕರ್ನಾಟಕದ ಮೊದಲ ಸಂಚಾರಿ ಚಿತಾಗಾರ ಆರಂಭವಾಗಿದೆ. ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗ್ರಾಮೀಣ ಭಾಗದ ಜನರ ಶವ ಸಂಸ್ಕಾರದ ಸಮಸ್ಯೆಗಳನ್ನು ಪರಿಹರಿಸಲು ಸಂಚಾರಿ ಚಿತಾಗಾರವನ್ನು ಆರಂಭಿಸಿದೆ.

ಇನ್ನು ಮುದೂರು ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು, ಯಾರಾದರೂ ಮೃತಪಟ್ಟರೆ ಪಾರ್ಥಿವ ಶರೀರವನ್ನು 40 ಕಿ.ಮೀ ದೂರದಲ್ಲಿರುವ ಕುಂದಾಪುರ ಸ್ಮಶಾನಕ್ಕೆ ಕೊಂಡೊಯ್ಯಬೇಕು. ಇದರಿಂದ ಸಾಕಷ್ಟು ಸಮಸ್ಯೆಗಳಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಗಣಿಸಿ ಮುದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು  ಕೇರಳದ ಸಂಸ್ಥೆಯೊಂದರಿಂದ 5.8 ಲಕ್ಷ ರೂ. ವೆಚ್ಚದ ಮೊಬೈಲ್ ಚಿತಾಗಾರವನ್ನು ಖರೀದಿಸಿದೆ.

ಇದರಲ್ಲಿ ಮೃತದೇಹವನ್ನು ಸುಡಲು 10 ಕೆ.ಜಿ ತೂಕದ ಎಲ್‌ಪಿಜಿ ಸಿಲಿಂಡರ್ ಬಳಸಲಾಗುತ್ತದೆ. ಇದರಿಂದ ಶವ ಎರಡು ಗಂಟೆಯೊಳಗೆ ಬೂದಿಯಾಗುತ್ತದೆ. ಸಾವಿನ ಮನೆಗೆ ಈ ವಾಹನ ಹೋಗಲಿದ್ದು, ಅಂತಿಮಸಂಸ್ಕಾರಕ್ಕೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.

ಸ್ಮಶಾನದೊಳಗೆ ಪಾರ್ಥಿವ ಶರೀರವನ್ನು ಇರಿಸುವ ಮೂಲಕ ಮಾಡಬೇಕಾದ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಬಹುದು. ದಹನ ಪ್ರಕ್ರಿಯೆಯಲ್ಲಿ ಹೊಗೆ ಅಥವಾ ದುರ್ವಾಸನೆ ಹೊರಹೊಮ್ಮುವುದಿಲ್ಲ. ಆರು ಅಡಿ ಉದ್ದದ ಮತ್ತು ಉಕ್ಕಿನಿಂದ ಮಾಡಲಾದ ಮೊಬೈಲ್ ಸ್ಮಶಾನವನ್ನು ಯಾರ ಮನೆ ಬಾಗಿಲಿಗೆ ಟ್ರಕ್‌ನಲ್ಲಿ ಸಾಗಿಸಬಹುದುದಾಗಿದೆ.

- Advertisement -
spot_img

Latest News

error: Content is protected !!