Thursday, June 25, 2026
Homeಕರಾವಳಿಉಡುಪಿಕಾರ್ಕಳ ; ಸಾಕ್ಷಿದಾರನ ಪತ್ನಿಗೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ

ಕಾರ್ಕಳ ; ಸಾಕ್ಷಿದಾರನ ಪತ್ನಿಗೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ

- Advertisement -
- Advertisement -

ಕಾರ್ಕಳ ; ಸಾಕ್ಷಿದಾರನ ಪತ್ನಿಗೆ ಹಲ್ಲೆಗೆ ಯತ್ನಿಸಿ, ಸಾಕ್ಷಿದಾರ ಹಾಗೂ ಅವರ ಪತ್ನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದ ಬೈಲೂರಿನಲ್ಲಿ ಮಾ.6 ರಂದು ನಡೆದಿದೆ.

ಗಣೇಶ್ ಪೂಜಾರಿ ಎಂಬಾತ ಮಾ.6 ರಂದು ಕಾರಿನಲ್ಲಿ ಬಂದು ಬೈಲೂರು ಪಂಚಾಯತ್ ಮುಂಭಾಗದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪುಷ್ಪಲತಾ ಎಂಬವರಿಗೆ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಪುಷ್ಪಲತಾ ಮತ್ತು ಅವರ ಪತಿ ರಾಜೇಂದ್ರ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೆ ಇಬ್ಬರನ್ನೂ ತಲವಾರಿನಿಂದ ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ರಾಜೇಂದ್ರ ಅವರು ಗಣೇಶ್ ಪೂಜಾರಿ ವಿರುದ್ಧ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿರುವುದರಿಂದ ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಲತಾ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!