- Advertisement -
- Advertisement -
ಕನ್ಯಾಡಿ: ನಿವೃತ್ತ ಶ್ಯಾನುಭೋಗರಾದ ದಿವಂಗತ ಬೋಜರಾವ್ ರವರ ಧರ್ಮಪತ್ನಿ ಶ್ರೀಮತಿ ಸರೋಜಿನಿ ಅಮ್ಮ ಅವರು ತಮ್ಮ ಕನ್ಯಾಡಿ ಮನೆಯಲ್ಲಿ ವಯೋಸಹಜ ಅರೋಗ್ಯ ಸಮಸ್ಯೆಗಳಿಂದ ಇಂದು ವಿಧಿವಶರಾಗಿದ್ದಾರೆ.
ಸರೋಜಿನಿ ಅಮ್ಮ ಅವರು ಭಾರತೀಯ ಸೇನೆಯ ಮಾಜಿ ಸೈನಿಕ ದಿವಂಗತ ಸತೀಶ್ ರಾವ್ ಕನ್ಯಾಡಿ, RSS ನ ನಿವೃತ್ತ ಪ್ರಚಾರಕ್ ನವೀನ್ ಕುಮಾರ್ ಬೆಂಗಳೂರು, ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಮನೋಹರ್ ರಾವ್ ಯು.ಬಿ, ಹೈಕೋರ್ಟ್ ನ ವಕೀಲ ನಿರಂಜನ್ ಕುಮಾರ್, ಮುರಳೀಧರ ರಾವ್ ಹಾಗೂ ಶ್ರೀಮತಿ ನಿರ್ಮಲಾ ಮೇರ್ಟ(ಮಗಳು) ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸರೋಜಿನಿ ಅಮ್ಮನ ಕುಟುಂಬದವರು ಉದಾರಮನಸ್ಸಿನ ದಾನಿಯಾಗಿದ್ದು, ಕನ್ಯಾಡಿ ಶಾಲೆಗೆ ಒಂದು ಕೊಠಡಿ, ಸ್ವಂತ ಜಾಗವನ್ನು ಸೇರಿದಂತೆ ಹಲವಾರು ಕೊಡುಗೆಯನ್ನು ಕನ್ಯಾಡಿಯ ಸರಕಾರಿ ಶಾಲೆಗೆ ನೀಡಿರುತ್ತಾರೆ.
- Advertisement -