- Advertisement -
- Advertisement -
ಸುಳ್ಯ: ಹೆಬ್ಬಾವು ಹಾಗೂ ಕಾಳಿಂಗ ಸರ್ಪದ ನಡುವೆ ಸೆಣಸಾಟ ನಡೆದು ಕಾಳಿಂಗ ಸರ್ಪ ಹೆಬ್ಬಾವನ್ನೆ ನುಂಗಿದ ಘಟನೆ ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾಲಡ್ಕದಲ್ಲಿ ನಡೆದಿದೆ.
ಇಂಜಿನಿಯರ್ ಆಗಿರುವ ಗಿರೀಶ್ ಪಾಲಡ್ಕರವರು ಎ.3ರಂದು ಸಂಜೆ ತೋಟಕ್ಕೆ ಹೋದ ಸಂದರ್ಭದಲ್ಲಿ ಕಾಳಿಂಗ ಹಾವು ಹೆಬ್ಬಾವನ್ನು ನುಂಗುವ ದೃಶ್ಯ ಕಣ್ಣಿಗೆ ಬಿದ್ದಿದೆ.
ಸುಮಾರು ಅರ್ಧ ಗಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಸೆಣಸಾಟ ನಡೆದಿದೆ. ಹೆಬ್ಬಾವು ಪ್ರಾಣ ರಕ್ಷಣೆ ಮಾಡಿಕೊಳ್ಳಲು ಹೋರಾಡಿದರೆ ಹೆಬ್ಬಾವನ್ನೆ ಕಾಳಿಂಗ ಸರ್ಪ ಅರ್ಧ ನುಂಗಿದೆ. ಈ ದೃಶ್ಯವನ್ನು ಗಿರೀಶ್ ಪಾಲಡ್ಕರವರು ತನ್ನ ಮೊಬೈಲ್ ಕ್ಯಾಮೆರದಲ್ಲಿ ಸೆರೆಹಿಡಿದ್ದಾರೆ.
- Advertisement -