- Advertisement -
- Advertisement -
ಈಶ್ವರಮಂಗಲ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯ ಕಂಪೌನ್ಡ್ ಕುಸಿದು ಬಿದ್ದು ಮಹಿಳೆಯೊಬ್ಬರು ಅಪಾಯದಿಂದ ಪಾರಾದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆಯಲ್ಲಿ ನಡೆದಿದೆ.
ಕನೂ೯ರು ಸಮೀಪ ಅಲಬಿಮೂಲೆ ಶೇಕ್ ಇಮಾಮು ಶಾಹೀದ್ ರವರ ಮನೆಯ ಅಡುಗೆ ಕೋಣೆಯ ಮೇಲೆ ಅವರ ಮಗನ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಅಡುಗೆ ಮನೆಯಲ್ಲಿ ಇದ್ದ ಮಹಿಳೆ ಸದ್ದು ಕೇಳಿ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳೀಯರು ಬಂದು ಅಡುಗೆ ಮನೆಗೆ ಬಿದ್ದ ಕಲ್ಲನ್ನು ತೆರವುಗೊಳಿಸಿದ್ದಾರೆ.ಪಂಚಾಯತ್ ನ ಮಾಜಿ ಉಪಾಧ್ಯಕ್ಷ ಶ್ರೀರಾಮ್ ಪಕ್ಕಳ,ಮಾಜಿ ಸದಸ್ಯರಾದ ಎಂ ಬಿ ಇಬ್ರಾಹಿಂ,ಅಬ್ದುಲ್ ಖಾದರ್,ಗ್ರಾಮ ಕರಣಿಕ ರಾಧಾಕೃಷ್ಣ,ಸಹಾಯಕ ರಘುನಾಥ,ಚಾಪ೯ಟೆ ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -