Friday, June 27, 2025
Homeಕರಾವಳಿಬೆಳ್ತಂಗಡಿ : ಪ್ರಸನ್ನ ಎಜುಕೇಷನ್ ಟ್ರಸ್ಟ್ ನಿಂದ ಅಕ್ರಮ ಗಣಿಗಾರಿಕೆ; ಕಾಂಗ್ರೆಸ್ ಮುಖಂಡನ ದರ್ಬಾರ್ ;...

ಬೆಳ್ತಂಗಡಿ : ಪ್ರಸನ್ನ ಎಜುಕೇಷನ್ ಟ್ರಸ್ಟ್ ನಿಂದ ಅಕ್ರಮ ಗಣಿಗಾರಿಕೆ; ಕಾಂಗ್ರೆಸ್ ಮುಖಂಡನ ದರ್ಬಾರ್ ; ಹಲವು ಮನೆಗಳಿಗೆ ಹಾನಿ

spot_img
- Advertisement -
- Advertisement -

ಬೆಳ್ತಂಗಡಿ : ಕಾಂಗ್ರೆಸ್ ಮುಖಂಡನ ದರ್ಬಾರ್ ನಿಂದ  ಅಕ್ರಮ ಕಲ್ಲು ಗಣಿಗಾರಿಕೆ ಕೆಲಸದಿಂದ ಹಲವು ಮನೆಗಳಿಗೆ ಹಾನಿಯಾದ ಘಟನೆ ಪ್ರಸನ್ನ ಬಳಿ ನಡೆದಿದೆ. ಈ ಬಗ್ಗೆ ಲಾಯಿಲ ಗ್ರಾಮ ಪಂಚಾಯತಿಗೆ ದೂರು ನೀಡಿದ್ರೂ ಕ್ಯಾರೆ ಮಾಡುತ್ತಿಲ್ಲ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿರುವ ಪ್ರಸನ್ನ ಎಜುಕೇಶನ್ ಟ್ರಸ್ಟ್ (ರಿ) ಆಡಳಿತ ಮಂಡಳಿ ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು ಕಲ್ಲುಗಳನ್ನು ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಬಳಸಿ ಸ್ಫೋಟ ಮಾಡಿ ಸಮತಟ್ಟು ಮಾಡುತ್ತಿದ್ದೆ. ಇದರಿಂದ ಸ್ಥಳೀಯ ಹಲವು ಮನೆಗಳು ಬಿರುಕು ಬಿಟ್ಟಿದ್ದು. ಬಾವಿ ಕೂಡ ಕುಸಿದು ಬಿದ್ದಿದೆ. ಪಂಚಾಯತ್ ಹಾಗೂ ಇತರ ಅಧಿಕಾರಿಗಳಿಗೆ ದೂರು ನೀಡಿದ್ರೂ ಕ್ಯಾರೆ ಮಾಡಿತ್ತಿಲ್ಲ ಎನ್ನುತ್ತಾರೆ ಊರವರು. ಈ ಬಗ್ಗೆ ಟ್ರಸ್ಟ್ ನ ಮುಖ್ಯಸ್ಥ ಮಾಜಿ ಸಚಿವ ಗಂಗಾಧರ ಗೌಡರ ಬಳಿ ಮನೆ ಮಂದಿ ಹೋಗಿ ವಿಚಾರ ತಿಳಿಸಿದಾಗ ನೀವು ನಿಮ್ಮ ಮನೆಯ ಕೆಲಸ ಮಾಡಿಸಿ 10,000 ಕೊಡುತ್ತೇನೆ ಎಂದಿದ್ದಾರಂತೆ ಆದ್ರೆ ಇವರ ಮನೆ ಕೆಲಸಕ್ಕೆ ಜಾಸ್ತಿ ಖರ್ಚು ಇದ್ದು ಇದನ್ನು ಯಾರು ಭರಿಸಬೇಕು ಎಂಬುವುದು ನೊಂದ ಮನೆಯವರ ಅಳಲು. ಮಹಿಳಾ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಲು ಗ್ರಾಮ ಪಂಚಾಯತಿನಿಂದ ಅನುಮತಿ ಪತ್ರ ಪಡೆದುಕೊಂಡಿಲ್ಲ ಎನ್ನಲಾಗಿದೆ.

ಅಕ್ರಮ ಗಣಿಗಾರಿಕೆ ಪಕ್ಕದಲ್ಲಿರುವ  ರವಿ ನಾಯ್ಕ ಅವರ ಬಾವಿ ಜಿಲೆಟಿನ್ ಸ್ಫೋಟದಿಂದ ಕುಸಿದು ಬಿದ್ದಿದ್ದು .‌ಮನೆ ಗೋಡೆ ಕೂಡ ಬಿರುಕು ಬಿಟ್ಟಿದೆ ಅದರ ಪಕ್ಕದ ಲತೀಫ್ ಅವರ ಮನೆಯ ಗೋಡೆ , ಸಿಮೆಂಟ್‌ ಸೀಟ್ ಕೂಡ ಬಿರುಕು ಬಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

ಊರವರ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಫೆ.19 ರಂದು  ಬೆಳ್ತಂಗಡಿ ತಹಶಿಲ್ದಾರ್ ಪೃಥ್ವಿ ಸಾನಿಕಂ ಭೇಟಿ ನೀಡಿ ವರದಿ ಮಾಡಿಕೊಂಡಿದ್ದು. ಈ ಬಗ್ಗೆ ಗಣಿ & ಭೂ ಇಲಾಖೆಗೆ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಗೆ ವರದಿ ಕಳುಹಿಸಿದ್ದಾರೆ.

- Advertisement -
spot_img

Latest News

error: Content is protected !!