ಮಂಗಳೂರು_ವಿಶ್ವ ಪರಿಸರ ದಿನದ ಅಂಗವಾಗಿ ಬೈಕಂಪಾಡಿ ಕುಡುಂಬೂರ್ ಪರಿಸರದಲ್ಲಿ ಶ್ರೀ ಅಶ್ವಿನ್ ಶೇಖಾ ಕುಡುಂಬೂರ್, ಇವರ ಮುಂಖಂಡತ್ವದಲ್ಲಿ ಸುತ್ತ ಪರಿಸರ ದಲ್ಲಿ ಸುಮಾರು 50 ಗಿಡಗಳನ್ನು ನೆಟ್ಟು ಸಮಾಜಕ್ಕೆ ಹಾಗೂ ಯುವಜನತೆಗೆ ಶುಭ ಸಂದೇಶ ನೀಡಿದರು.
ಈ ಸಂದರ್ಭ ಅವರು ಮಾತನಾಡಿ ಯುವ ಜನಾಂಗ ಪ್ರಕೃತಿ ಯನ್ನು ಉಳಿಸಿ ಬೆಳೆಸಲು ಎಲ್ಲರೂ ಪಣ ತೊಟ್ಟು ಅವರವರ ಪರಿಸರ ದಲ್ಲಿ ಮುಂಬರುವ ದಿನಗಳಲ್ಲಿ ಗಿಡಗಳನ್ನು ನೆಟ್ಟು ಎಲ್ಲರೂ ಪರಿಸರವನ್ನು ರಕ್ಷಿಸಬೇಕು ಎಂದು ಕಿವಿ ಮಾತು ಹೇಳಿದರು.

ಈ ಸಂದರ್ಭದಲ್ಲಿ ಅವರು ತನ್ನ ಅಜ್ಜ ಶ್ರೀ ನಲ್ಯಗುತ್ತು ಗುತ್ತಿನಾರ್ ಕೀರ್ತಿಶೇಷ ಕುಡುಂಬೂರು ಭೋಜ ಶೆಟ್ಟಿ ಅವರ ಪರಿಸರ ಪ್ರೇಮ ಹಾಗೂ ಅವರ ಸಮಾಜಸೇವೆ ಬಗ್ಗೆ ಸ್ಮರಿಸಿ ಈ ಪರಿಸರ ದಿನದ ಗೌರವ ಸಲ್ಲಿಸಿದರು.

ಶ್ರೀ ಅಶ್ವಿನ್ ಶೇಖಾ ಇವರು ಈ ಸಂದರ್ಭದಲ್ಲಿ ಒಂದು ಆಶ್ವಾಸನೆ ನೀಡಿ ಮುಂದಿನ ವರ್ಷದಲ್ಲಿ ನೂರಕ್ಕೂ ಹೆಚ್ಚು ಗಿಡ ನೆಡುವ ಯೋಜನೆಯ ಬಗ್ಗೆ ತಿಳಿಸಿ ಯುವ ಜನತೆಗೆ ಸ್ಫೂರ್ತಿ ತುಂಬಿದರು.
ಈ ಸಂದರ್ಭದಲ್ಲಿ ರಾಜೇಶ್ ಬೈಕಂಪಾಡಿ, ನಾಮ ನಿರ್ದೇಶಕ ಸದಸ್ಯರು ಮಂಗಳೂರು ನಗರ ಪಾಲಿಕೆಯ ಸುಮಿತ್ರ ಕರಿಯ,ಮಂಗಳೂರು ನಗರ ಪಾಲಿಕೆಯ ಸದಸ್ಯರಾದ10ನೇ ವಾರ್ಡ್,ಕರುಣಾಕರ ಶೆಟ್ಟಿ,ಬಾಲಕ್ರಷ್ಣ ಶೆಟ್ಟಿ, ಜರ್ನಾಧನ ದೇವಾಡಿಗ,ಯೋಗೀಶ್ ಕುಡುಂಬೂರ್, ವೇದಾಕ್ಷ ಕುಡುಂಬೂರ್,ಸುಧೀರ್ಪೂಜಾರಿ,ಪ್ರಸಾದ್ ಶೆಟ್ಟಿ ಕುಡುಂಬೂರ್,ದೇವಪ್ಪ ಪೂಜಾರಿ, ಫ್ರೆಂಡ್ಸ್ ಕುಡುಂಬೂರ್ ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.