ಕಲಬುರಗಿ: ಅಲೆಮಾರಿ/ಅರೆ-ಅಲೆಮಾರಿ ಸಮುದಾಯದಲ್ಲಿ ಬರುವ ಅತೀ ಹಿಂದುಳಿದ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡದ (ಎಸ್ಟಿ) ಪಟ್ಟಿಯಲ್ಲಿ ಸೇರಿಸಬೇಕೆಂದು ಅಖಿಲ ಕರ್ನಾಟಕ ಹೆಳವ ಸಮಾಜದ ರಾಜ್ಯ ನಿರ್ದೇಶಕ ಬಸವರಾಜ ಹೆಳವರ ಯಾಳಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಹೆಳವ ಸಮುದಾಯದವರು ಅತೀ ಕಡಿಮೆ ಜನಸಂಖ್ಯೆಯಿದ್ದು, ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷ ಣಿಕವಾಗಿ ಬಹಳ ಹಿಂದುಳಿದಿದೆ. ರಾಜ್ಯದಲ್ಲಿ ಅಲೆಮಾರಿ/ಅರೆ-ಅಲೆಮಾರಿ ಜನಾಂಗಗಳಿಲ್ಲಿ 46 ಜಾತಿಗಳು ಒಳಪಡುತ್ತವೆ, ಸಮಾಜದ ಬಾಂಧವರ ಆಭ್ಯುದಯಕ್ಕಾಗಿ ಹೆಳವ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು ಬಹಳ ಅತ್ಯಗತ್ಯವಾಗಿದೆ.
ಹೆಳವ ಸಮಾಜವನ್ನು ಎಸ್ಟಿಗೆ ಸೇರಿಸುವ ಕಡತ ಈಗಾಗಲೇ ಸಮಾಜ ಕಲ್ಯಾಣ ಸಚಿವರ ಅನುಮೋದನೆಗೆ ಕಳುಹಿಸಿರುವುದರಿಂದ ಆದಷ್ಟು ಶೀಘ್ರದಲ್ಲೇ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಸೇರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಾಜದ ಮುಖಂಡರಾದಂತ ಸಾಯಬಣ್ಣ ಹೆಳವರ, ಕಲಬುರಗಿ ಜಿಲ್ಲಾದ್ಯಕ್ಷರು ಹಾಗೂ ಮಲ್ಲಿಕಾರ್ಜುನ ಆರ್ ಹೆಳವರ ಹೆಬ್ಬಾಳ, ಜಿಲ್ಲಾ ಗೌರವಾಧ್ಯಕ್ಷರು ಆಗ್ರಹಿಸಿದ್ದಾರೆ.
ಹೆಳವ ಸಮುದಾಯದ ಹಿತವನ್ನು ಹಾಗೂ ಹಕ್ಕುಗಳನ್ನು ಮಾನ್ಯ ಮುಖ್ಯಮಂತ್ರಿಯವರು ವಿಶೇಷ ಗಮನಹರಿಸಿ, ಪರಿಶಿಷ್ಟ ಪಂಗಡದಲ್ಲಿ (ST) ಸೇರಿಸಲು ಮಾನ್ಯತೆಗೆ ಅರ್ಹವೆಂದು ಪರಿಗಣಿಸಿ, ಶೀಘ್ರದಲ್ಲೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಅಗತ್ಯ ದಾಖಲಾತಿಗಳೊಂದಿಗೆ ಮುಂದಿನ ಕ್ರಮಕ್ಕಾಗಿ ಕಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.