- Advertisement -
- Advertisement -
ಮಂಗಳೂರು: ಯುವವಾಹಿನಿ ( ರಿ ) ಕೇಂದ್ರ ಸಮಿತಿಯ ದ್ವೀತಿಯ ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಆಯ್ಕೆಗೊಂಡ ಹರೀಶ್ ಕೆ ಪೂಜಾರಿ ಯವರನ್ನು ಯುವವಾಹಿನಿ ( ರಿ ) ಮಂಗಳೂರು ಘಟಕದ ಸಭೆಯಲ್ಲಿ ಅಭಿನಂದಿಸಲಾಯಿತು.
ಈ ಸಂಧರ್ಭದಲ್ಲಿ ಯುವವಾಹಿನಿಯ ಸದಸ್ಯರು ಕಳೆದ 20 ವರ್ಷಗಳಿಂದ ಹರೀಶ್ ಕೆ ಪೂಜಾರಿ ಯವರು ಯುವವಾಹಿನಿಯ ಚಟುವಟಿಕೆ ಗಳಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯನ್ನು ಮಾಡಿರುವುದನ್ನು ನೆನಪು ಮಾಡಿಕೊಂಡರು ಹಾಗೂ ಯುವವಾಹಿನಿಯ ಜೊತೆ ಗೆಜ್ಜೆಗಿರಿ , ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರ , ಹಾಗೂ ಸಮಾಜದ ವಿವಿಧ ಸಂಘಟನೆಗಳ ಜೊತೆ ಕೆಲಸ ಮಾಡುತ್ತಿರುವುದರ ಬಗ್ಗೆ ಮೆಚ್ಚುಗೆ ಸೂಚಿಸಿ ಅಭಿನಂದಿಸಿದರು .
- Advertisement -