- Advertisement -
- Advertisement -
ಉಡುಪಿ: ಗುಂಪೊಂದು ಸೇರಿ ಪುತ್ತೂರಿನ ಹನುಮಂತ ನಗರದ ದಿನೇಶ್ ಆಚಾರ್ಯ ಎಂಬವರ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಕುರಿತು ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದಿನೇಶ್ ಆಚಾರ್ಯ ಅವರು , ಸಚಿನ್ , ನಿಧಿನ್ , ರಾಕೇಶ್ ಯಾನೆ ಮುನ್ನಾ , ಶೈಲೇಶ್ ಆಚಾರ್ಯ , ನಿಲೇಶ್ ಆಚಾರ್ಯ ಹಾಗೂ ಇತರ ವಿರುದ್ಧ ದೂರು ನೀಡಿದ್ದಾರೆ.
ದಿನೇಶ್ ಆಚಾರ್ಯ ಅವರು ಹನುಮಂತ ನಗರ ಸಹೋದರ ಯುವಕ ಮಂಡಲದ ಬಳಿ ನಿಂತಿದ್ದ ವೇಳೆ ಈ ಐದು ಮಂದಿ ಇತರರೊಂದಿಗೆ ಸೇರಿ ಅವಾಚ್ಯ ಶಬ್ದಗಳಿಂದ ಬೈದು ಹಾಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿರುವ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
- Advertisement -