- Advertisement -
- Advertisement -
ಲಕ್ನೋ-ದೇಶಾದ್ಯಂತ ಚರ್ಚೆ ಯಲ್ಲಿರುವ ಬಲವಂತದ ಮತಾಂತರ ವಿಷಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಯೋಗಿ ಅವರು ಜಾರಿಗೆ ತಂದಿರುವ ಸುಗ್ರೀವಾಜ್ಞೆಗೆ ರಾಜ್ಯಪಾಲ ಆನಂದಿ ಬೇನ್ ಅವರು ಅಂಕಿತ ಹಾಕಿದ್ದಾರೆ. ಈ ಕುರಿತು ಉತ್ತರಪ್ರದೇಶ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಸುಗ್ರೀವಾಜ್ಞೆಯು ಬಲವಂತದ ಮತಾಂತರಕ್ಕೆ ಮುಂದಾಗುವವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮತ್ತು ಹಲವಾರು ಅಕ್ರಮಗಳ ತಡೆಯುವ ಉದ್ದೇಶ ಹೊಂದಿದೆ.ಅನ್ಯಕೋಮಿನ ವ್ಯಕ್ತಿಗಳು ಮತಾಂತರ ಉದ್ದೇಶದಿಂದ ಬೇರೆ ಕೋಮಿನವರು ವಿವಾಹವಾಗಿ ನಂತರ ಬಲವಂತದಿಂದ ಮತಾಂತರ ಮಾಡಲು ಯತ್ನಿಸಿದಲ್ಲಿ ಈ ನಿಯಮಗಳ ಅಡಿಯಲ್ಲಿ ಅವರು ಶಿಕ್ಷಾರ್ಹರಾಗಿರುತ್ತಾರೆ.
- Advertisement -