- Advertisement -
- Advertisement -
ಬೆಳ್ತಂಗಡಿ; ಧರ್ಮಸ್ಥಳಕ್ಕೆ ಬಂದಿದ್ದ ಬೆಂಗಳೂರಿನ ಭಕ್ತೆಯೊಬ್ಬರ ಮಾಂಗಲ್ಯ ಸರ ಕಳವಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೆಂಗಳೂರಿನ ಹಲಸೂರಿನ ನಿವಾಸಿ ಶ್ರೀದೇವಿ (39) ಎಂಬವರು ದಿನಾಂಕ 18-12-2023 ರಂದು ಬೆಳಿಗ್ಗೆ ಧರ್ಮಸ್ಥಳಕ್ಕೆ ತನ್ನ ಸ್ನೇಹಿತೆಯರ ಜೊತೆ ಯಾತ್ರಾರ್ಥಿಗಳಾಗಿ ಬಂದಿದ್ದರು. ಬಳಿಕ ಸುಬ್ರಮಣ್ಯಕ್ಕೆ ಹೋಗಲು ಧರ್ಮಸ್ಥಳ ಮಹಾದ್ವಾರದ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಸಂಜೆ ನಿಂತುಕೊಂಡಿದ್ದಾಗ, ಜನಸಂದಣಿಯಲ್ಲಿ ತನ್ನ ಕೈಯಲ್ಲಿದ್ದ ಮಾಂಗಲ್ಯ ಸರವನ್ನು ಇರಿಸಿದ ಪರ್ಸ್ ಅನ್ನು ಯಾರೋ ಕಳ್ಳರು ಕದ್ದಿದ್ದಾರೆ. ಕಳವಾದ ಮಾಂಗಲ್ಯ ಸರದ ಅಂದಾಜು ಮೌಲ್ಯ 2,00,000/ ರೂ ಆಗಬಹುದು ಎಂಬುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಅ ಕ್ರ: 109/2023 ಕಲಂ:379 ಐ ಪಿ ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -