- Advertisement -
- Advertisement -
ಉಡುಪಿ: ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಚಿವ ವಿ.ಸೋಮಣ್ಣರ ಬಳಿ ತೆರಳಿದಾಗ ಸಚಿವರು ಮಹಿಳೆಗೆ ಕಪಾಳಮೋಕ್ಷ ಮಾಡಿದರು. ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತಿದ್ರೆ ಕೂಡಲೇ ಅವರು ಸಚಿವ ಸೋಮಣ್ಣರಿಂದ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಶಾಸಕ ಅರವಿಂದ ಲಿಂಬಾವಳಿ ಕೂಡಾ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ರು. ಬಿಜೆಪಿಯ ನಾಯಕರುಗಳಿಗೆ ಮಹಿಳೆಯರು ಎಂದರೆ ತಾತ್ಸಾರದ ವಸ್ತು ಎನ್ನುವುದು ಸಾಬೀತಾಗ್ತಿದೆ. ಸೋಮಣ್ಣ ಅವರ ವರ್ತನೆಗೆ ಸರ್ಕಾರ ಕೂಡಲೇ ಕಣ್ಣು ತೆರೆದು ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ರು.
- Advertisement -