- Advertisement -
- Advertisement -
ಕಾಸರಗೋಡು; ಗ್ಯಾರೇಜ್ ಮಾಲೀಕರೊಬ್ಬರ ಮೃತದೇಹ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಕಾಸರಗೋಡಿನ ಬಂದಡ್ಕದಲ್ಲಿ ನಡೆದಿದೆ. ಬಂದಡ್ಕ ಪೆಟ್ರೋಲ್ ಸಮೀಪದ ನಿವಾಸಿ ರತೀಶ್(42) ಮೃತ ದುರ್ದೈವಿ.
ಗ್ಯಾರೇಜ್ ಜೊತೆಗೆ ಆಂಬ್ಯುಲೆನ್ಸ್ ಚಾಲಕರಾಗಿಯೂ ದುಡಿಯುತ್ತಿದ್ದ ರತೀಶ್ ಗುರುವಾರ ರಾತ್ರಿ 9:30 ರ ಸುಮಾರಿಗೆ ಸ್ಕೂಟರ್ ನಲ್ಲಿ ಮನೆಯಿಂದ ತೆರಳಿದವರು ವಾಪಸ್ ಮನೆಗೆ ಬಂದಿರಲಿಲ್ಲ.ಶುಕ್ರವಾರ ಬೆಳಗ್ಗೆ ಗ್ಯಾರೇಜ್ ಸಮೀಪದ ರಸ್ತೆಯ ಚರಂಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.ಸ್ಕೂಟರ್ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
ಬೇಡಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
- Advertisement -