ಬೆಳ್ತಂಗಡಿ: ಉದ್ಯೋಗ ನಿಮಿತ್ತ ಬೆಂಗಳೂರಿಗೆ ತೆರಳುವವರಿಗೆ ಶಾಸಕ ಹರೀಶ್ ಪೂಂಜ ನೆರವಾಗಿದ್ದಾರೆ. ಲಾಕ್ಡೌನ್ನಿಂದಾಗಿ ಬೆಂಗಳೂರಿನಲ್ಲಿ ಹಲವೆಡೆ ಉದ್ಯೋಗ ಮಾಡುತ್ತಿದ್ದವರು ಊರಿಗೆ ಬಂದಿದ್ದರು.
ಬದುಕಿನ ಅಗತ್ಯತೆಗಳಿಗಾಗಿ, ಬದುಕನ್ನು ಕಟ್ಟುವ ಅನಿವಾರ್ಯ ಸಂದರ್ಭದಿಂದ ಬೆಂಗಳೂರಿಗೆ ತೆರಳಬೇಕಾದ ನನ್ನ ಬಂಧುಗಳನ್ನು ಹಾರೈಸಿ ಬೀಳ್ಕೊಡುವ ಸಂದರ್ಭ. ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಉತ್ತಮ ಬಸ್ಸಿನ ವ್ಯವಸ್ಥೆ ಮಾಡಿ, ಆರೋಗ್ಯ ತಪಾಸಣೆ, ಸಾಮಾಜಿಕ ಅಂತರವನ್ನು ಕಾಪಾಡಿ ಪ್ರತಿ ಬಸ್ಸಿಗೆ 20 ಜನರಂತೆ ಬೆಂಗಳೂರಿನ ವಿವಿಧ ಭಾಗಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.#Covid19 #Corona #BLT #BANGALORE #BELTHANGADY
ಆದರೆ, ಇದೀಗ ಬೆಂಗಳೂರಿನ ಕೆಲವು ಕಂಪನಿಗಳಲ್ಲಿ ವಾಪಸ್ ಕೆಲಸಕ್ಕೆ ಬರುವಂತೆ ತಿಳಿಸಿದ್ದು, ಇವರಿಗೆ ಬೆಂಗಳೂರಿಗೆ ಹೋಗಲು ಸಾರಿಗೆ ವ್ಯವಸ್ಥೆ ಇರಲಿಲ್ಲ. ಈ ವಿಚಾರವನ್ನು ಕೆಲವರು ಶಾಸಕ ಹರೀಶ್ ಪೂಂಜ ಅವರ ಗಮನಕ್ಕೆ ತಂದಾಗ, ತಕ್ಷಣ ಸ್ಪಂದಿಸಿದ ಅವರು,ಲಾಕ್ಡೌನ್ ನಿಯಮಕ್ಕೆ ಲೋಪವಾಗದಂತೆ ಸರಿಯಾದ ರೀತಿ ಕ್ರಮಜರುಗಿಸಿ, ತಲಾ ಒಂದು ಬಸ್ನಲ್ಲಿ 20 ಜನರಂತೆ ಸುಮಾರು 200 ಜನರನ್ನ 10 ಬಸ್ಗಳಲ್ಲಿ ಉಚಿತವಾಗಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದಾರೆ.
ಬದುಕಿನ ಅಗತ್ಯತೆಗಳಿಗಾಗಿ, ಬದುಕನ್ನು ಕಟ್ಟುವ ಅನಿವಾರ್ಯ ಸಂದರ್ಭದಿಂದ ಬೆಂಗಳೂರಿಗೆ ತೆರಳಬೇಕಾದ ನನ್ನ ಬಂಧುಗಳನ್ನು ಹಾರೈಸಿ ಬೀಳ್ಕೊಡುವ ಸಂದರ್ಭ. ಸಾಧ್ಯವಾದಷ್ಟು ಮಟ್ಟಿಗೆ ಅವರಿಗೆ ಉತ್ತಮ ಬಸ್ಸಿನ ವ್ಯವಸ್ಥೆ ಮಾಡಿ, ಆರೋಗ್ಯ ತಪಾಸಣೆ, ಸಾಮಾಜಿಕ ಅಂತರವನ್ನು ಕಾಪಾಡಿ ಪ್ರತಿ ಬಸ್ಸಿಗೆ 20 ಜನರಂತೆ ಬೆಂಗಳೂರಿನ ವಿವಿಧ ಭಾಗಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು.#Covid19 #Corona #BLT #BANGALORE #BELTHANGADY