Saturday, May 4, 2024
Homeಕರಾವಳಿಬಂಟ್ವಾಳ;ತುಂಬೆ ವೆಂಟೆಡ್ ಡ್ಯಾಂಗೆ ರೈತರ ಮುತ್ತಿಗೆ

ಬಂಟ್ವಾಳ;ತುಂಬೆ ವೆಂಟೆಡ್ ಡ್ಯಾಂಗೆ ರೈತರ ಮುತ್ತಿಗೆ

spot_img
- Advertisement -
- Advertisement -

ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಮ್ ನೀರಿನಿಂದ ಕೃಷಿ ಭೂಮಿ ನದಿಪಾಲಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರೈತರು ವೆಂಟೆಡ್ ಡ್ಯಾಂಗೆ ಮುತ್ತಿಗೆ ಹಾಕಿದ್ದಾರೆ.

ವೆಂಟೆಡ್ ಡ್ಯಾಂನ ಗೇಟ್ ಗೆ ಬೀಗ ಹಾಕಿ ಗೇಟ್ ಬಳಿಯೇ ರೈತರನ್ನು ಪೊಲೀಸರು ತಡೆ ಹಿಡಿದಿದ್ದು ಪೊಲೀಸರ ವಿರುದ್ಧ ರೈತರಿಂದ ಆಕ್ರೋಶ ವ್ಯಕ್ತವಾಗಿದೆ.

ಮಂಗಳೂರು ಪಾಲಿಕೆ ಆಯುಕ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ದ ಧಿಕ್ಕಾರ ಕೂಗಿರುವ ರೈತರು, ನಾಶವಾದ ಕೃಷಿ ಭೂಮಿಗೆ ಪರಿಹಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಅಗ್ರಹಿಸಿದ್ದಾರೆ.

ಡ್ಯಾಮ್ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದ್ದು, ಪ್ರತಿಭಟನಕಾರರು ಆಗಮಿಸುವ ಮೊದಲೇ ಅಣೆಕಟ್ಟಿಗೆ ಮಹಾನಗರ ಪಾಲಿಕೆ ವತಿಯಿಂದ ಬೀಗ ಹಾಕಲಾಗಿತ್ತು.

ಅಣೆಕಟ್ಟಿನಿಂದ ಹೊರ ಬರುವ ನೀರಿನ ರಭಸಕ್ಕೆ ಕೃಷಿ ಭೂಮಿ ನೀರು ಪಾಲಾಗಿದ್ದು, ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ಎಸ್.ಬಿ.‌ ಕೂಡಲಿಗಿ, ಡ್ಯಾಂನ ಕಾರ್ಯಪಾಲಕ ಇಂಜಿನಿಯರ್‌ ನರೇಶ್ ಶೆಣೈ ಭೇಟಿ ನೀಡಿದ್ದಾರೆ.

- Advertisement -
spot_img

Latest News

error: Content is protected !!