Friday, June 27, 2025
Homeಕರಾವಳಿಉಜಿರೆ : ಚಾರ್ಮಾಡಿ ರಸ್ತೆಯಲ್ಲಿರುವ ಅನಾರ್ ಟಯರ್ ಅಂಗಡಿಯಲ್ಲಿ ಬೆಂಕಿ‌ ಅವಘಡ

ಉಜಿರೆ : ಚಾರ್ಮಾಡಿ ರಸ್ತೆಯಲ್ಲಿರುವ ಅನಾರ್ ಟಯರ್ ಅಂಗಡಿಯಲ್ಲಿ ಬೆಂಕಿ‌ ಅವಘಡ

spot_img
- Advertisement -
- Advertisement -

ಉಜಿರೆ :ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದಲ್ಲಿರುವ ಶಶಿಧರ ಗೌಡ ಬೆಡಿಗುತ್ತು ಅವರವ ಮಾಲೀಕತ್ವದ ವಾಣಿಜ್ಯ ಮಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬುಧವಾರ ಮಧ್ಯಾಹ್ನ ಭಾರೀ ಅಗ್ನಿ ಅನಾಹುತ ಸಂಭವಿಸಿದೆ. 

ಬೆಂಕಿ‌ ಅನಾಹುತದಿಂದ ಸುವರ್ಣ ಹೊಟೇಲ್ ಪಕ್ಕದ ಅನಾರ್ ಟಯರ್ಸ್ ಮಳಿಗೆ , ರಕ್ಷಾ ಆಗ್ರೋ ಮಳಿಗೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಇದೀಗ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. 

ಇಂದು ಗಣೇಶ ಚತುರ್ಥಿ ಪ್ರಯುಕ್ತ ಮಳಿಗೆಗಳೆಲ್ಲವೂ ಬಂದ್ ಆಗಿತ್ತು. ಈ ವೇಳೆ ಎಲ್ಲೋ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಈ ಅವಘಡ ಆಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ‌ ಭಾರೀ ಸಂಖ್ಯೆಯಲ್ಲಿ‌ ಜನ ಜಮಾಯಿಸಿದ್ದರು.

- Advertisement -
spot_img

Latest News

error: Content is protected !!