- Advertisement -
- Advertisement -
ಬೆಳ್ತಂಗಡಿ : ದಿನದಿಂದ ದಿನ ಬಿಸಿಲಿನ ತೀವ್ರತೆ ಹೆಚ್ಚಾಗುತಿದ್ದು ಕೆಲವೆಡೆ ಅಗ್ನಿ ಅನಾಹುತಗಳು ಸಂಭವಿಸುತ್ತಿದೆ. ಫೆ 16 ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪಡ್ಲಾಡಿ ಸಮೀಪದ ದೇವೊಟ್ಟು ಎಂಬಲ್ಲಿ ಮಧ್ಯಾಹ್ನ 2.30 ರ ಸುಮಾರಿಗೆ ರಸ್ತೆ ಬದಿ ಬೆಂಕಿ ಅನಾಹುತ ಸಂಭವಿಸಿದ್ದು ಸಮೀಪ ರಬ್ಬರ್ ತೋಟಕ್ಕೆ ಹಾಗೂ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸುತ್ತಲೂ ಬೆಂಕಿ ಅವರಿಸಿತ್ತು .
ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜ ಸ್ಥಳಕ್ಕೆ ತೆರಳಿ ಮೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು. ಈ ಬಗ್ಗೆ ಸ್ಪಂದಿಸಿದ ಮೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಲೈನ್ ಮ್ಯಾನ್ ಗಳಾದ ರಾಜೇಶ್ , ಯೋಗೀಶ್, ವಿಜಯ, ಬಸವರಾಜ್, ಅಗ್ನಿಶಾಮಕ ಇಲಾಖೆಯ ಮಲಗೌಡ, ಚಾಲಕ ಮೋಹನ ಗೌಡ, ಶ್ರವಣ್ ನಾಯಕ್,ರಂಗನಾಥ್, ಬಸವರಾಜ್ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -