Monday, April 29, 2024
Homeಕರಾವಳಿಬಂಟ್ವಾಳ; ಪಾಂಡವರಕಲ್ಲಿನಲ್ಲಿ ಯುವಕನಿಗೆ ಚೂರಿ ಇರಿತ

ಬಂಟ್ವಾಳ; ಪಾಂಡವರಕಲ್ಲಿನಲ್ಲಿ ಯುವಕನಿಗೆ ಚೂರಿ ಇರಿತ

spot_img
- Advertisement -
- Advertisement -

ಬಂಟ್ವಾಳ; ಸ್ನೇಹಿತರೊಂದಿಗೆ ಬಾರ್ ಗೆ ಹೋದ ಯುವಕನಿಗೆ ಚೂರಿಯಿಂದ ಇರಿದ ಘಟನೆ ಬಂಟ್ವಾಳ ತಾಲೂಕಿನ ಬಡಗ ಕಜೆಕಾರು ಪಾಂಡವರಕಲ್ಲು ಎಂಬಲ್ಲಿ ನಡೆದಿದೆ.

ಸ್ಥಳೀಯರಾದ ಹರ್ಷಿತ್‌ ಎಂ. ಹಾಗೂ ಗೆಳೆಯರಾದ ಪ್ರವೀಣ್‌, ಕೇಶವ ಮತ್ತು ಸನತ್‌ ಅವರೊಂದಿಗೆ ಬಾರ್‌ಗೆ ಬಂದಾಗ ಪರಿಚಿತ ದೇವೊಟ್ಟು ನಿವಾಸಿ ಸುರೇಶ್‌ ಎಂಬಾತ ಹರ್ಷಿತ್‌ ಹಾಗೂ ಸ್ನೇಹಿತ ರನ್ನು ಕಂಡು ಹರ್ಷಿತ್‌ಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.  ಬಳಿಕ ಅವರನ್ನು ಆರೋಪಿ ಸುರೇಶ್‌ ತಡೆದು ನಿಲ್ಲಿಸಿ ಆತನ ಕೈಯಲ್ಲಿದ್ದ ಒಂದು ಸಣ್ಣ ಚೂರಿಯಿಂದ ಹರ್ಷಿತ್‌ಗೆ ಇರಿದಿದ್ದಾನೆ.

ಹಲ್ಲೆಯನ್ನು ತಪ್ಪಿಸಲು ಬಂದಾಗ ಪ್ರವೀಣ್‌ ಅವರಿಗೂ ಚಾಕು ಬೀಸಿದ್ದು ಇದರಿಂದ ಪ್ರವೀಣ್‌ ಅವರ ಎಡ ಕೈ ಅಂಗೈಗೆ ಗಾಯವಾಗಿದೆ. ಬಳಿಕ ಹರ್ಷಿತ್‌ರ ಗೆಳೆಯರಾದ ಕೇಶವ ಹಾಗೂ ಸನತ್‌ ಅವರು ಆರೋಪಿ ಸುರೇಶ್‌ ಹಲ್ಲೆ ಮಾಡುವುದನ್ನು ತಡೆದಿದ್ದಾರೆ.

ಹಲ್ಲೆಯಿಂದ ಗಾಯಗೊಂಡ ಪ್ರವೀಣ್‌ ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದಾರೆ. ಹಾಗೂ ಹರ್ಷಿತ್‌ ಮಂಗಳೂರು ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆದಿದ್ದು, ಹರ್ಷಿತ್‌ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!