- Advertisement -
- Advertisement -
ಬೆಳ್ತಂಗಡಿ : ತಂದೆ ಮಗ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪುದುವೆಟ್ಟು ಗ್ರಾಮದ ಮಿಯ್ಯಾರು ಪಲ್ಲದಪಲಿಕೆ ಎಂಬಲ್ಲಿ ನಡೆದಿದೆ. ಮನೆಯ ಅಂಗಳದಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಗುರುವ (75 ) ಮತ್ತು ಪುತ್ರ ಓಡಿ (45) ಮೃತ ದುರ್ದೈವಿಗಳು.
ಇವರಿಬ್ಬರ ಮೃತ ದೇಹ ಮನೆಯ ಅಂಗಳದಲ್ಲಿದೆ ಪತ್ತೆಯಾಗಿದೆ. ಸದ್ಯ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನೀಡಿದ್ದಾರೆ. ನಿನ್ನೆ ರಾತ್ರಿ ಇಬ್ಬರು ಊಟ ಮಾಡುವಾಗ ವೇಳೆ ಅಣಬೆ ಪದಾರ್ಥ ತಿಂದು ವಾಂತಿ ಮಾಡಿ, ಬಳಿಕ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸಾವಿಗೆ ನಿಜ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
- Advertisement -