- Advertisement -
- Advertisement -
ಸುಳ್ಯ ಇಲ್ಲಿನ ಕಸದ ಸಮಸ್ಯೆ ಬಗ್ಗೆ ಕನ್ನಡದ ಖ್ಯಾತ ನಟ ಅನಿರುದ್ದ್ ಧ್ವನಿಯೆತ್ತಿದ್ದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನದ ಪೋಸ್ಟ್ ಹಂಚಿಕೊಂಡಿರುವ ನಟ ಅನಿರುದ್ಧ್ ಗೆ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಉದ್ದಟತನದ ಉತ್ತರ ಕೊಟ್ಟಿದ್ದಾರೆ. ಅದಕ್ಕೆ ನಟ ಅನಿರುದ್ಧ್ ಅಧ್ಯಕ್ಷರಿಗೆ ಮುಟ್ಟಿ ನೋಡಿಕೊಳ್ಳುವಂತ ಉತ್ತರ ಕೊಟ್ಟಿದ್ದು , ಇದೀಗ ನಟ ಕೊಟ್ಟ ಉತ್ತರ ಬಾರಿ ವೈರಲ್ ಆಗ್ತಿದೆ.
“ಅನಿರುದ್ದನಿಗೆ 10 ಲಾರಿ ಕಳಿಸಿಕೊಡ್ಲಿಕ್ಕೆ ಹೇಳಿ. ಲೋಡಿಂಗ್ ನಮ್ಮ ಕಾರ್ಮಿಕರಿಂದ ಮಾಡಿಸ್ತೇವೆ. ಫೇಸ್ಬುಕ್ ವಿಡಿಯೋದಿಂದ ಸಮಸ್ಯೆ ಬಗೆಹರಿಯಲ್ಲ” ಎಂದು ನಗರ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಕಮೆಂಟ್ ಹಾಕಿದ್ದಕ್ಕೆ ಅನಿರುದ್ದ್ “ಯಾವಾಗ ಕಳಿಸಿಕೊಡಬೇಕು ದಯಮಾಡಿ ತಿಳಿಸಿ, ಕಳಿಸಿಕೊಡುವೆ” ಎಂದಿದ್ದಾರೆ.
- Advertisement -