- Advertisement -
- Advertisement -
ಮಂಗಳೂರು: ವಾಟ್ಸಾಪ್ ನಲ್ಲಿ ಪೊಲೀಸರ ವಿರುದ್ಧ ಬಹಿರಂಗ ಕೊಲೆ ಬೆದರಿಕೆ ಹಾಕಿದ ಬಗ್ಗೆ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರದೀಪ್ ಎಂಬುವವರು ಈ ಬಗ್ಗೆ ದೂರು ದಾಖಲಿಸಿದ್ದು, ಕರೆಂಟ್ ಅಫೇರ್ಸ್ ಎಂಬ ವ್ಹಾಟ್ಸಾಪ್ ಗ್ರೂಪ್ನಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಚರ್ಚೆಯ ವೇಳೆ ಉಪ್ಪಿನಂಗಡಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯ ವೇಳೆ ನಡೆದ ಲಾಠಿ ಚಾರ್ಜ್ನಲ್ಲಿ ಗಾಯಗೊಂಡವನ ಫೋಟೋ ಗೆ ಬೆದರಿಕೆ ಕಮೆಂಟ್ ಮಾಡಿದ್ದಾನೆ ಎನ್ನಲಾಗಿದೆ.
“ಇದು ತಲ್ವಾರ್ ದಾಳಿ ಪೊಲೀಸರಿಗೆ ತಲ್ವಾರ್ ಹಿಡಿಯೋಕೆ ಮುಸಲ್ಮಾನರನ್ನು ಒಡೆದು ಉರುಳಿಸೋಕೆ ಯಾರು ಪರ್ಮಿಷನ್ ಕೊಟ್ಟಿದ್ದು, ಬೇವರ್ಸಿ ಪೊಲೀಸರನ್ನು ಮುಂದೆ ಒಂದು ದಿನ ರೋಡಲೇ ಉರುಳಿಸಬೇಕಾಗುತ್ತದೆ ಇದೇ ರೀತಿಯಾಗಿ’ ಎಂದು ಕಾಮೆಂಟ್ ಮಾಡಿದ್ದು, ಪೋಲಿಸರಿಗೆ ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
- Advertisement -