- Advertisement -
- Advertisement -
ಮಂಗಳೂರು : ನಿಶ್ಚಿತಾರ್ಥವಾಗಿದ್ದ ಯುವತಿ ಚಿನ್ನಾಭರಣ ನಗದು ಸಹಿತ ನಾಪತ್ತೆಯಾದ ಪ್ರಕರಣವು ಲವ್ ಜಿಹಾದ್ ಪ್ರಕರಣವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ.
ನಾಪತ್ತೆಯಾದ ಯುವತಿಯ ಮನೆಗೆ ಭೇಟಿ ನೀಡಿ ಹೆತ್ತವರಿಗೆ ದೈರ್ಯ ತುಂಬಿದ್ದು, ಆರೋಪಿಯನ್ನ ಕೂಡಲೇ ಬಂಧಿಸಬೇಕು. ಈ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ.
ಮೂಲತಃ ಗದಗ ನಿವಾಸಿಗಳಾದ ಇವರು, ಬರ್ಕೆ ಠಾಣಾ ವ್ಯಾಪ್ತಿಯ ಗಾಂಧಿನಗರದ ಅಪಾರ್ಟ್ಮೆಂಟ್ವೊಂದರಲ್ಲಿ ವಾಚ್ಮನ್ ಆಗಿರುವ ಯಶೋಧಾ ಎಂಬವರ ಪುತ್ರಿ ರೇಷ್ಮಾ ( 21) ಅವರ ನಿಶ್ಚಿತಾರ್ಥ ಆ. 21 ರಂದು ನಡೆದಿದ್ದು, ನಿಶ್ಚಿತಾರ್ಥ ಸಂದರ್ಭ ಗಂಡಿನ ಮನೆಯವರು ನೀಡಿದ ಚಿನ್ನಾಭರಣ ಸಮೇತ ನಾಪತ್ತೆಯಾಗಿದ್ದರು.
- Advertisement -