- Advertisement -
- Advertisement -
ವಿಟ್ಲ: ಮನೆಮನೆಗೆ ತೆರಳಿ ಮತದಾನ ಸಮೀಕ್ಷೆ ಮಾಡುತ್ತಿದ್ದ ತಂಡವೊಂದನ್ನು ಸ್ಥಳೀಯರು ವಿಟ್ಲ ಪೊಲೀಸರ ವಶಕ್ಕೆ ನೀಡಿದ ಘಟನೆ ಸಾಲೆತ್ತೂರಿನಲ್ಲಿ ನಡೆದಿದೆ. ಸಾಲೆತ್ತೂರು ಪರಿಸರದಲ್ಲಿ 6 ಯುವತಿಯರ ಸಹಿತ 11 ಮಂದಿಯ ತಂಡವೊಂದು ಮನೆಮನೆಗೆ ತೆರಳಿ, “ನಿಮ್ಮ ಕ್ಷೇತ್ರ ಯಾವುದು?
ಯಾವ ಪಕ್ಷಕ್ಕೆ ಮತದಾನ ಮಾಡುತ್ತೀರಿ?” ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎನ್ನಲಾಗಿದೆ.ಇವರ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಅವರನ್ನು ವಿಚಾರಿಸಿದ್ದು, ಆಗ ಅವರು “ನಾವು ಧ್ರುವ ಕಂಪೆನಿ ವತಿಯಿಂದ ಬಂದಿದ್ದು, ಮತದಾನ ಸಮೀಕ್ಷೆ ಮಾಡುತ್ತಿದ್ದೇವೆ” ಎಂದು ಹೇಳಿ ಬಳಿಕ ಸಮರ್ಪಕ ದಾಖಲೆ ನೀಡಿರಲಿಲ್ಲ .
ಬಳಿಕ ಸ್ಥಳೀಯರು ಅವರನ್ನು ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಊರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
- Advertisement -