ಬೆಂಗಳೂರು: 2024 ರ ಲೋಕಸಭಾ ಚುನಾವಣೆಯಲ್ಲಿ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಎಂದು ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿವಿಎಸ್, ಆಕಸ್ಮಾತ್ ಟಿಕೆಟ್ ಕೊಡಲ್ಲ ಅಂತಾದರೂ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ, ಈ ಬಾರಿ ಸ್ಪರ್ಧೆ ಮಾಡಬೇಡಿ ಅಂದ್ರೆ ಮಾಡಲ್ಲ ಎಂದಿದ್ದಾರೆ.
ಅಲ್ಲದೇ, ನಾನು ಸಿಎಂ ಸ್ಥಾನವನ್ನೇ ಬಿಟ್ಟು ಕೊಟ್ಟವನು, ಟಿಕೆಟ್ ವಿಚಾರಕ್ಕೆ ನಾನು ಮಾತಾಡಲು ನಾನು ಯಾರು ಎಂದು ಸದಾನಂದ ಗೌಡ ಹೇಳಿದ್ದಾರೆ.
ಇದೇ ವೇಳೆ 13 ಸಂಸದರಿಗೆ ಟಿಕೆಟ್ ಇಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸದಾನಂದ ಗೌಡ, ಇದರ ಹಿಂದೆ ನಮ್ಮವರೇ ಇದ್ದಾರೋ ಅಥವಾ ಮಾಧ್ಯಮ ವಿಶ್ಲೇಷಣೆಯೋ ಗೊತ್ತಿಲ್ಲ, ಎರಡು ಮೂರು ಬಾರಿ ನನ್ನ ತೇಜೋವಧೆ ಮಾಡಲಾಗಿತ್ತು ಇದೀಗ ನಮ್ಮ ಪಕ್ಷದ ಮತ್ತು
ನಮ್ಮ 13 ಸಂಸದರ ತೇಜೋವಧೆ ಮಾಡಲಾಗ್ತಿದೆ ಎಂದು ಹೇಳಿದ್ದರೆ.
ತೇಜೋವಧೆ ನಿಲ್ಲಿಸಬೇಕು ಎಂದು ನಮ್ಮ ಹಿರಿಯರಿಗೆ ಕೇಳುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ ಡಿವಿಎಸ್, ಚುನಾವಣೆ ಸಂದರ್ಭದಲ್ಲಿ ಅನಾರೋಗ್ಯದ ನಡುವೆಯೂ ಪಕ್ಷದ ಕೆಲಸ ಮಾಡಿದ್ದೇನೆ, 13 ಜನ ಎಂಪಿಗಳು ಒಂದು ವರ್ಷಗಳ ಕಾಲ ಕೆಲಸ ಮಾಡದಿದ್ರೆ ಅಭಿವೃದ್ಧಿ ಕಾರ್ಯ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.