Sunday, June 29, 2025
Homeಕರಾವಳಿಪುತ್ತೂರು ವಿಧಾನಸಭಾ ಕ್ಷೇತ್ರದಿಂದ ದಿನೇಶ್ ಮೆದು ಅವರಿಗೆ ಸಿಗುತ್ತಾ ಟಿಕೆಟ್?

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ದಿನೇಶ್ ಮೆದು ಅವರಿಗೆ ಸಿಗುತ್ತಾ ಟಿಕೆಟ್?

spot_img
- Advertisement -
- Advertisement -

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೋದು ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಹೊಸ ಮುಖಗಳಿಗೆ ಅವಕಾಶ ಸಿಗುತ್ತೆ ಅಂತಾ ಹೇಳಲಾಗುತ್ತಿದ್ದು ಸದ್ಯ ಪುತ್ತೂರಿನಿಂದ ಪಕ್ಷದಲಲ್ಲಿ ಸಕ್ರೀಯರಾಗಿರುವ ಪುತ್ತೂರು ಎಪಿಎಂಸಿ ಅಧ್ಯಕ್ಷರಾಗಿದ್ದ ದಿನೇಶ್ ಮೆದು ಟಿಕೆಟ್ ನೀಡಲು ಹೈಕಮಾಂಡ್ ಒಲವು ತೋರಿದೆ ಎನ್ನಲಾಗುತ್ತಿದೆ.

ಆರ್ ಎಸ್ ಎಸ್ ನಲ್ಲಿ ಸಕ್ರೀಯರಾಗಿರುವ ದಿನೇಶ್ ಮೆದು ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದಿದ್ದಾರೆ. ಕಾಲೇಜು ಜೀವನದಲ್ಲಿ ಎಬಿವಿಪಿಯಲ್ಲೂ ತೊಡಗಿಸಿಕೊಂಡಿದ್ದರು.ಎಬಿವಿಪಿಯ ತಾಲ್ಲೂಕು ಹೋರಾಟ ಪ್ರಮುಖ್ ಆಗಿ ಮುಂಚೂಣಿಯಲ್ಲಿದ್ದರು. ಮಂಗಳೂರು ವಿ.ವಿ.ಯ ಸೆನೆಟ್ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ದಕ್ಷಿಣ ಕನ್ನಡದ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವಹೊಂದಿದ್ದಾರೆ ಸವಣೂರು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರಾಗಿಯೂ ಕೆಲಸ ಮಾಡಿರುವ ದಿನೇಶ್ ಮೆದು ಅವರು ಸಂಘಟನೆಯ ಮೂಲಕ ಬೆಳೆದು ಬಂದವರು.

ರಾಜಕೀಯ ಕ್ಷೇತ್ರದ ಮೊದಲ ಪ್ರಯತ್ನದಲ್ಲೇ ಪುತ್ತೂರು ತಾ.ಪಂ.ಸದಸ್ಯರಾಗಿ ಆಯ್ಕೆಯಾಗಿ ,ತಾ.ಪಂ.ಉಪಾಧ್ಯಕ್ಷರಾಗಿಯೂ ಸೇವೆ ಮಾಡಿದ್ದರು. ಪುತ್ತೂರು ಎಪಿಎಂಸಿ ನಿರ್ದೇಶಕರಾಗಿ ಆಯ್ಕೆಯಾದ ಅವರು ಎರಡು ಅವಧಿಗೆ ಎಪಿಎಂಸಿ ಅಧ್ಯಕ್ಷರಾಗಿ ರೈತ ಪರ ಕೆಲಸ ಮಾಡಿದ್ದರು.ಇದೀಗ ಅವರ ಹೆಸರು ಮುನ್ನಲೆಗೆ ಬಂದಿದ್ದು ಏನಾಗುತ್ತೆ ಅಂತಾ ಕಾದು ನೋಡ್ಬೇಕು.

- Advertisement -
spot_img

Latest News

error: Content is protected !!